ನೇರ ನಡೆ ನುಡಿಯ ವ್ಯಕ್ತಿತ್ವ ಧೀಮಂತ ಜನನಾಯಕ :ಎಂ ಎಂ ಜೆ ಹರ್ಷವರ್ಧನ್

0
794

 ಕೊಟ್ಟೂರು: ಜನರ ಕಷ್ಟ ನಷ್ಟಗಳಿಗೆ ಸದಾ ಸ್ಪಂದಿಸುವ ಜಾತ್ಯಾತೀತ ನಾಯಕ ನೇರ ನಡೆ ನುಡಿಯ ವ್ಯಕ್ತಿತ್ವ ಧೀಮಂತ ನಾಯಕ ಎನಿಸಿ ಕೊಂಡಿರುವ  ಉಜ್ಜಯಿನಿ ಸದ್ದರ್ಮಪೀಠದ    ಕಾರ್ಯದರ್ಶಿಗಳು ಹಾಗೂ ಮಾಜಿ  ಜಿಲ್ಲಾ ಪಂಚಾಯತಿ  ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್ ರವರಿಗೆ 61ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿ ಬಳಗ ವಿಜೃಂಭಣೆಯಿಂದ ಆಚರಿಸಿದರು. ಬೆಳಗ್ಗೆಯಿಂದಲೇ ಅವರ ನಿವಾಸ ಅಭಿಮಾನಿಗಳಿಂದ ಗಿಜಿಗಿಡುತ್ತಿತ್ತು ಹರ್ಷಣ್ಣನವರಿಗೆ ಶುಭಾಶಯ ಕೋರಲು ಹಿತೈಷಿಗಳು ಕಾರ್ಯಕರ್ತರು ಜನಪ್ರತಿನಿಧಿಗಳು ಸೇರಿದಂತೆ ನಾ ಮುಂದು ತಾ ಮುಂದು ಎಂದು ಪುಷ್ಪಗುಚ್ಛ ನೀಡಿ ಹೂವಿನ ಹಾರ ಹಾಕಿ ಸಂಭ್ರಮಿಸಿದರು.

ಹರ್ಷಣ್ಣನವರ 61ನೇ  ಜನ್ಮ ದಿನದ ಸವಿ ನೆನಪಿಗಾಗಿ ಕೊಟ್ಟೂರ ಪಟ್ಟಣ ಪಂಚಾಯಿತಿ ಆಡಳಿತ ವತಿಯಿಂದ ನಿರ್ಣಯ ಕೈಗೊಂಡು 9 ವಸತಿ ವಿನ್ಯಾಸಗಳಿಗೆ ಅವರಿಂದ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಿ ಉದ್ಘಾಟಿಸಲಾಯಿತು. 

 ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಭಾರತಿ ಸುಧಾಕರ್ ಪಾಟೀಲ್ ಸೇರಿದಂತೆ  ಕಾಂಗ್ರೆಸ್ ಮುಖಂಡರು, ಪಟ್ಟಣ ಪಂಚಾಯತಿ ಸದಸ್ಯರು ಗ್ರಾಮ ಪಂಚಾಯಿತಿ ಪದಾಧಿಕಾರಿಗಳು ಊರಿನ ಗಣ್ಯರು ನಾಗರೀಕರು ವಿವಿಧ ಸಂಘಟನೆಗಳ ಸದಸ್ಯರು ಅಧಿಕಾರಿ ವರ್ಗದವರು  ಬೀದಿ ಬದಿ ವ್ಯಾಪಾರಸ್ಥರು ಆಟೋ ಚಾಲಕ ಸಂಘದ ಪದಾಧಿಕಾರಿಗಳು ಹುಟ್ಟುಹಬ್ಬಕ್ಕೆ ಸಾಕ್ಷಿಯಾದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here