ವಿಜಯನಗರ : ಇತ್ತೀಚೆಗೆ ಹೊಸಪೇಟೆಯ ನ್ಯಾಯಲಯದ ಆವರಣದಲ್ಲಿ ನಡೆದ ವಕೀಲ ತಾರಿಹಳ್ಳಿ ವೆಂಕಟೇಶ್ ಅವರ ಬರ್ಬರ ಹತ್ಯೆಯನ್ನು
ಹಿರಿಯ ವಕೀಲರಾದ ಟಿ.ಎಂ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ವಕೀಲರ ಸಂತಾಪ ಸಭೆಯಲ್ಲಿ ಖಂಡಿಸಿದರು.
‘ದಿನನಿತ್ಯ ವಕೀಲರ ಮೇಲೆ ಹಲ್ಲೆ, ಬೆದರಿಕೆ, ದೌರ್ಜನ್ಯಗಳು
ನಡೆಯುತ್ತಿದ್ದು, ವಕೀಲರಿಗೆ ಹಾಗೂ ವಕೀಲರ ಕುಟುಂಬದವರಿಗೆ ರಕ್ಷಣೆ ಇಲ್ಲದ್ದಂತಾಗಿದೆ, ಕಾರಣ ಸರ್ಕಾರ ಕೂಡಲೇ ವಕೀಲರ ರಕ್ಷಣ ಕಾಯ್ದೆಯನ್ನು ರೂಪಿಸಿ ಶೀಘ್ರವೇ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.
ವಕೀಲರಾದ ಎಸ್. ಎಂ ಶಿವಪ್ರಕಾಶ್, ಬಾವಿಕಟ್ಟೆ ಶಿವಾನಂದಪ್ಪ, ಜಯಶ್ರೀ ಲಿಂಗರಾಜ, ಕೆ.ಬಸವರಾಜ ಟಿ.ರಮೇಶ ಇದ್ದರು.