ಕೊಟ್ಟೂರು: ಕರುನಾಡ ಕಾರ್ಮಿಕರ ವೇದಿಕೆಯ ನೂತನವಾಗಿ ವಿಜಯನಗರ ಜಿಲ್ಲೆಯ ಅಧ್ಯಕ್ಷರಾಗಿ ಆಯ್ಕೆಯಾದ ಶಿವಕುಮಾರ್ ಗೌಡ ಅವರನ್ನು ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಚಂದ್ರ ಗೌಡ, ಹಾಗೂ ಮಹಿಳಾ ರಾಜ್ಯಾಧ್ಯಕ್ಷರು ಲಕ್ಷ್ಮಿ ಗೌಡ ಅವರ ಸಮ್ಮುಖದಲ್ಲಿ ಬೆಂಗಳೂರು ಮುಖ್ಯ ಕಚೇರಿಯಲ್ಲಿ ಆಯ್ಕೆ ಮಾಡಿ ಸನ್ಮಾನ ಮಾಡಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕರುನಾಡ ಕಾರ್ಮಿಕರ ವೇದಿಕೆಯ ನೂತನ ವಿಜಯನಗರ ಜಿಲ್ಲೆಯ ಅಧ್ಯಕ್ಷರು ಶಿವಕುಮಾರ್ ಗೌಡ, ನಾವು ಒಗ್ಗಟ್ಟಿನಿಂದ, ಪ್ರೀತಿ, ವಿಶ್ವಾಸದಿಂದ ಅಣ್ಣ ತಮ್ಮಂದಿರಂತೆ, ಒಂದೇ ತಾಯಿಯ ಮಕ್ಕಳಂತೆ ಸಂಘಟನೆಯನ್ನು ಕಟ್ಟಿ, ಕರುನಾಡು ಕಾರ್ಮಿಕ ವೇದಿಕೆಯ ಸಂಘಟನೆಯ ತತ್ವ ಸಿದ್ಧಾಂತಗಳ ಅಡಿಯಲ್ಲಿ ಶಿಸ್ತಿನ ಸಿಫಾಯಿಗಳಂತೆ ಹೋರಾಟಗಳನ್ನು ಹಮ್ಮಿಕೊಂಡು ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಧಕ್ಕೆ ಬಾರದಂತೆ ಕನ್ನಡ ನಾಡು, ನುಡಿಯನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ. ನಾವು ಯಾವುದೇ ಕನ್ನಡ ಪರ ಹೋರಾಟಗಳನ್ನು ಮಾಡಬೇಕಾದರೆ ರಾಜ್ಯಾಧ್ಯಕ್ಷರಿಗೆ ಮತ್ತು ಮಹಿಳಾ ರಾಜ್ಯಾಧ್ಯಕ್ಷರಿಗೆ ವಿಷಯವನ್ನು ತಿಳಿಸಿ ಅವರ ಮಾರ್ಗದರ್ಶನದಂತೆ ಸಕ್ರಿಯವಾಗಿ ಹೋರಾಟಗಳನ್ನು ಮಾಡಬೇಕಾಗಿದೆಯೆಂದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರು ಚಂದ್ರ ಗೌಡ, ಮಹಿಳಾ ರಾಜ್ಯಾಧ್ಯಕ್ಷರು ಲಕ್ಷ್ಮಿ ಗೌಡ, ಸಂಘದ ಸದಸ್ಯರು, ಐ. ದ್ವಾರಕೀಶ್, ಕನ್ನಳ್ಳಿ. ರಾಜಣ್ಣ, ಕೆ. ಮಂಜುನಾಥ್ ಗೌಡ, ಸತೀಶ್, ಉಮಪತಿ, ಕನ್ನಳ್ಳಿ ವೀರೇಶ್, ಸೋಮನಗೌಡ, ಬಣಕಾರ್ ಬಸವರಾಜ್, ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಶಿವರಾಜ್ ಕನ್ನಡಿಗ