ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ಫಾರಂ-57ರಡಿ ಅರ್ಜಿ ಸಲ್ಲಿಸಿದ 37 ರೈತರಿಗೆ ಪಟ್ಟಾ ವಿತರಣೆ

0
129

ಹೊಸಪೇಟೆ(ವಿಜಯನಗರ),ಏ.29: ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಕಂದಾಯ ಇಲಾಖೆ ಮತ್ತು ಬಗರ್ ಹುಕುಂ ಸಕ್ರಮೀಕರಣ ಸಮಿತಿ ವತಿಯಿಂದ ಹೊಸಪೇಟೆ ತಾಲೂಕು ಕಚೇರಿ ಆವರಣದಲ್ಲಿ ಸಾಗುವಳಿ ಚೀಟಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವು ಶುಕ್ರವಾರದಂದು ನಡೆಯಿತು.
ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಸಪೇಟೆ ತಾಲೂಕಿನ ಕಮಲಾಪುರ ಹೋಬಳಿಯಲ್ಲಿ ಎಸ್.ಸಿ 03, ಎಸ್.ಟಿ 19 ಹಾಗೂ ಸಾಮಾನ್ಯ ವರ್ಗದ 15 ಜನರು ಸೇರಿದಂತೆ ಒಟ್ಟು 37 ಫಲಾನುಭವಿಗಳಿಗೆ 69 ಎಕರೆ ಭೂಮಿ ಮಂಜೂರಾಗಿದ್ದು, ಇದಕ್ಕೆ ಸಂಬಂಧಿಸಿದ ಸಾಗುವಳಿ ಚೀಟಿ ಪ್ರಮಾಣ ಪತ್ರವನ್ನು ಈ ಸಂದರ್ಭದಲ್ಲಿ ರೈತರಿಗೆ ವಿತರಿಸಿದರು.
24 ವರ್ಷಗಳ ಪ್ರಯತ್ನದ ಫಲದಿಂದಾಗಿ ಇಂದು ಈ ಕಾರ್ಯ ಸಾಧ್ಯವಾಗಿದ್ದು, ಕಂದಾಯ ಸಚಿವರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸಿದರು.
ಸಂವಿಧಾನದ ಪ್ರಮುಖ ಅಂಗವಾಗಿರುವ ಕಾರ್ಯಾಂಗ ಮತ್ತು ಶಾಸಕಾಂಗ ಎರಡು ಚಕ್ರಗಳಿದ್ದಂತೆ;ಸಮಾನವಾಗಿ ಸಾರ್ವಜನಿಕರ ಸೇವೆ ಮಾಡುವುದರ ಮೂಲಕ ಸಮಾಜದ ಅಭಿವೃದ್ಧಿ ಸಾಧ್ಯ. ಈ ಹಿನ್ನಲೆಯಲ್ಲಿ ಅಕ್ರಮ ಸಕ್ರಮದಲ್ಲಿ ರೈತರಿಗೆ ಪಟ್ಟ ದೊರಕಿಸಿಕೊಡುವಲ್ಲಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳÀ ಕಾರ್ಯಕ್ಷಮತೆಯನ್ನು ಮೆಚ್ಚಿ ರೈತರ ಪರವಾಗಿಯೂ ಅಭಿನಂದನೆ ಸಲ್ಲಿಸಿದರು.
ಕಮಲಾಪುರ ಹೋಬಳಿಯಲ್ಲಿ ರೈತರಿಂದ ನಮೂನೆ 57ರಡಿಯಲ್ಲಿ 516 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 60 ಅರ್ಜಿಗಳು ಬಗರ್ ಹುಕುಂ ಸಮಿತಿಯಲ್ಲಿ ಅಂಗೀಕರಿಸಲಾಗಿದೆ ಹಾಗೂ 159 ಅರ್ಜಿಗಳು ತಿರಸ್ಕøತಗೊಂಡಿದ್ದು, ಇನ್ನೂ 297 ಅರ್ಜಿಗಳು ಬಾಕಿ ಇರುತ್ತವೆ.
ಇಂದು ಬಗರ್ ಹುಕ್ಕುಂ ಸಮಿತಿ ಸಭೆಯಲ್ಲಿ ಒಟ್ಟು 28 ಪ್ರಕರಣಗಳ ಪ್ರಸ್ತಾವನೆಯನ್ನು ಪೂರ್ಣ ಪ್ರಮಾಣದಲ್ಲಿ ಮಂಡಿಸಲಾಗುವುದು ಎಂದು ಅವರು ತಿಳಿಸಿದರು.
ಪಟ್ಟ ಪಡೆದ ರೈತರ ವಿವರ: ನಾಗಭೂಷಣ ತಂದೆ ಹೊನ್ನೂರಪ್ಪ, ಈರಣ್ಣ ತಂದೆ ತಿಮ್ಮಯ್ಯ, ಲಿಂಗಯ್ಯ ತಂದೆ ಪೂಜಾರಿ ಬೊಮ್ಮಯ್ಯ, ಮಾರಯ್ಯ ತಂದೆ ಪೂಜಾರಿ ಬೊಮ್ಮಯ್ಯ, ಪಂಪಾಪತಿ ಸಿ/ಎ ಹುಲಿಗೆಮ್ಮ, ಗಂಗಮ್ಮ ಗೋನಲ್ ಕೇರಿ ತಂದೆ ರಾಜಪ್ಪ, ಈರಣ್ಣ ತಂದೆ ಓಬಯ್ಯ, ತಿಮ್ಮಪ್ಪ ತಂದೆ ತಿಪ್ಪಯ್ಯ, ಗಂಗಮ್ಮ ಗಂಡ ದಿ|| ಸಣ್ಣ ತಿಮ್ಮಯ್ಯ, ಹನುಮಯ್ಯ ತಂದೆ ಮಾರಯ್ಯ, ಈರಣ್ಣ ಜಿಗಳಿ ತಂದೆ ಹನುಮಯ್ಯ, ಪಕ್ಕೀರಮ್ಮ ಮೀನುಗಾರ ಗಂಡ ಹೇಮಗಿರಿಯಪ್ಪ, ಸಣ್ಣ ಯಂಕಪ್ಪ ತಂದೆ ಮೂಕಪ್ಪ, ನಾಗರಾಜ ತಂದೆ ರಂಗಪ್ಪ, ವರಲಕ್ಷ್ಮೀ ಗಂಡ ದೊಡ್ಡ ಮಲ್ಲಪ್ಪ, ದೇವಮ್ಮ ಜೀನೂರು ಗಂಡ ಗಾದೆಪ್ಪ, ಮಾರೆಕ್ಕ ಗಂಡ ಗಂಗಪ್ಪ, ಕಣಿಮೆವ್ವ ಗಂಡ ಗುರುನಾಥ, ಲಕ್ಷ್ಮೀ ಗಂಡ ದೊಡ್ಡ ಮಾರೆಪ್ಪ, ವೆಂಕಟೇಶ್ವರಲು ತಂದೆ ವರದಪ್ಪ, ಎಲ್.ಸಂತೊಷ ತಂದೆ ಗೋವಿಹನುಮಂತಪ್ಪ, ಕುರುಬರ ಕೆಂಚಪ್ಪ ತಂದೆ ಗಂಗಪ್ಪ, ನಾಗಮ್ಮ ಗಂಡ ಸಕ್ರಪ್ಪ ಬಿ, ಹೆಚ್.ವೀರೇಶ್ ತಂದೆ ಹೆಚ್.ಈರಣ್ಣ, ಎಮ್ ಹನುಮಂತಪ್ಪ ತಂದೆ ದಿ|| ಬಸಪ್ಪ ಎಮ್, ಕೆ.ಮೌನೇಶ್ವರ ತಂದೆ ದಿ.ಕಾಳಪ್ಪ, ರಾಮಲಿ ತಂದೆ ಭರಮಪ್ಪ, ಬಿ ಕಾಶಪ್ಪ ತಂದೆ ಬಿ ಲಿಂಗಪ್ಪ, ಕಾಗಿ ಗಂಗಾಧರಮ್ಮ ಗಂಡ ಕಾಗಿ ಬಸಪ್ಪ, ರುದ್ರಮ್ಮ ಗಂಡ ಹನುಮಂತಪ್ಪ, ಕಾಗಿ ಕಾಳಮ್ಮ ಗಂಡ ಕಾಗಿ ರಾಮಪ್ಪ, ಅನ್ಸರ್ ತಂದೆ ಮಹಮ್ಮದ್ ಹನೀಫ್, ನವಲಿ ಗಂಗಮ್ಮ ಗಂಡ ನವಲಿ ಈರಪ್ಪ ಇವರೆಲ್ಲರೂ ಪಟ್ಟ ಪಡೆದ ರೈತರಾಗಿದ್ದಾರೆ.
ಈ ಸಂದರ್ಭದಲ್ಲಿ ಬಗರ್ ಹುಕ್ಕಂ ಸಮಿತಿಯ ಸದಸ್ಯರಾದ ಬರ್ಮನ್ ಗೌಡ, ಜಯಪದ್ಮ, ತಹಶೀಲ್ದಾರ್ ವಿಶ್ವಜಿತ ಮೆಹತಾ, ಗ್ರೇಡ್-2 ತಹಶೀಲ್ದಾರ್ ಅಮರ್‍ನಾಥ್, ಮರಿಯಮ್ಮನಹಳ್ಳಿ ಕಂದಾಯ ನಿರೀಕ್ಷಕ ಅಂದಾನಗೌಡ, ಹೊಸಪೇಟೆಯ ಪ್ರಭಾರಿ ಕಂದಾಯ ನಿರೀಕ್ಷಕ ಗುರುಬಸವರಾಜ, ಕಮಲಾಪುರ ಗ್ರಾಮದ ಪ್ರಭಾರಿ ಕಂದಾಯ ನಿರೀಕ್ಷಕ ಅನಿಲ್ ಕುಮಾರ್ ಮತ್ತು ಕಂದಾಯ ಲೆಕ್ಕಾಧಿಕಾರಿಗಳಾದ ರವಿಚಂದ್ರ, ಮಹಂತೇಶ್ ಮತ್ತು ಸಿಬ್ಬಂದಿಗಳು ಇದ್ದರು.

LEAVE A REPLY

Please enter your comment!
Please enter your name here