ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜಯಂತಿ ಆಚರಣೆ

0
141

ಹೊಸಪೇಟೆ (ವಿಜಯನಗರ)ಏ.14: ಹೊಸಪೇಟೆಯ ಅಂಬೇಡ್ಕರ್ ಸರ್ಕಲ್ ಹತ್ತಿರವಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಗೆ ಜಿಲ್ಲಾ ಉಸ್ತುವಾರಿ ಸಚಿವರರಾದ ಆನಂದ್ ಸಿಂಗ್ ಅವರು ಮಾಲಾರ್ಪಣೆ ಮಾಡಿದರು.
ಸಚಿವರರಾದ ಆನಂದ್ ಸಿಂಗ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜಯಂತಿಯ ಶುಭಾಶಯಗಳನ್ನು ತಿಳಿಸಿ ಕೋವಿಡ್-19ನ ಎರಡನೇ ಅಲೆಯು ರಾಜ್ಯದಲ್ಲಿ ಹೆಚ್ಚಾಗಿದ್ದು ಸರ್ಕಾರದ ಆದೇಶದಂತೆ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜಯಂತಿಯನ್ನು ಇಂದು ಸರಳವಾಗಿ ಆಚರಿಸಲಾಯಿತು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹೊಸಪೇಟೆಯ ಆಯುಕ್ತರರಾದ ಸಿದ್ದರಾಮಪ್ಪ, ಹೊಸಪೇಟೆಯ ತಹಸೀಲ್ದಾರರಾದ ಹೆಚ್.ವಿಶ್ವನಾಥ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರರಾದ ವಂಸತ್ ಕುಮಾರ್, ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯಾದ ವಿಶ್ವನಾಥ್, ಶಿಕ್ಷಣ ಇಲಾಖೆಯ ಅಧಿಕಾರಿಯಾದ ಸುನಂದಮ್ಮ, ನಗರ ಸಭೆಯ ಪೌರಯುಕ್ತರರಾದ ಮನ್ಸೂರು ಅಲಿ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷರರಾದ ಎನ್.ವೀರಸ್ವಾಮಿ, ಡಾ.ಬಾಬು ಜಗಜೀವನ್ ರಾಂ ಸಂಘದ ಅಧ್ಯಕ್ಷರರಾದ ಮೇಶಾಕ ಅಂಕಾಳಿ ಹಾಗೂ ಸಂಘದ ಮುಖಂಡರರು ಇದ್ದರು.

LEAVE A REPLY

Please enter your comment!
Please enter your name here