ಹಾಡಹಗಲೇ ಕಳ್ಳತನ ಚಿನ್ನಾಭರಣ ಅಪಹರಣ: ಪರಿಶೀಲನೆ ಸಿಪಿಐ ಸೋಮಶೇಖರ್ ರೆಡ್ಡಿ

0
953

ಕೊಟ್ಟೂರು:ಡಿ:22:-ಪಟ್ಟಣದ ವಿದ್ಯಾನಗರದ ಮನೆಯೊಂದರಲ್ಲಿ 152 ಗ್ರಾಂ ತೂಕದ ಬಂಗಾರ ಆಭರಣ ಹಾಗೂ 62 ಸಾವಿರ ರೂ. ನಗದು ಕಳ್ಳತನವಾಗಿರುವ ಘಟನೆ ಬುಧವಾರ ನಡೆದಿದೆ.

ಇಲ್ಲಿ ಕನಕ ಭವನದ ಬಳಿಯ ಸುಭದ್ರಮ್ಮ ಗುರುಸಿದ್ದಪ್ಪ ಇವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಬೀಗ ಹಾಕಿದ್ದ ಮಾಲೀಕರು ಅದರ ಕೀ ಯನ್ನು ಮನೆ ಮುಂಭಾಗದಲ್ಲಿನ ಕುಂಡದಲ್ಲಿ ಹಾಕಿದ್ದರು. ಇದನ್ನು ತಿಳಿದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ತಾಳಿ ಜೈನ್‌ಗಳು, ಕೊರಳ ಚೈನ್, ಉಂಗುರಗಳು, ಝುಮುಕಿಗಳು, ಕಿವಿಯೋಲೆ, ಕೈ ಜೈನ್, ಕಿವಿಯೋಲೆ ಬೇವಿನಕಾಯಿ ಸರ ಸೇರಿ 150ಗ್ರಾಂ ತೂಕದ ಅಂದಾಜು 5.9 ಲಕ್ಷ ರೂ. ಮೌಲ್ಯದ ಆಭರಣಗಳು ಹಾಗೂ 62 ಸಾವಿರ ರೂ.ಗಳನ್ನು ಕದ್ದು ಪರಾರಿಯಾಗಿದ್ದಾರೆ.

ಮಾಲಿಕರು ಮನೆಗೆ ಬಂದು ಬಾಗಿಲು ತೆರೆದಿರುವುದು ಕಂಡಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಕುರಿತು ದೂರು ನೀಡಿದ್ದು, ಕೊಟ್ಟೂರು ಪೊಲೀಸ್ ಠಾಣೆಯ ಸಿಪಿಐ ಸೋಮಶೇಖರ್ ರೆಡ್ಡಿ ಕೂಡಲೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here