ಜ್ಞಾನದ ಜ್ಯೋತಿ ಬೆಳಗುವುದೇ ಕಾರ್ತೀಕ ದೀಪೋತ್ಸವದ ಸಂಕೇತ: ಷ.ಬ್ರ. ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ

0
181

ಕೊಟ್ಟೂರು: ಪ್ರತಿಯೊಬ್ಬರಲ್ಲಿ ಜ್ಞಾನದ ಜಿಜ್ಯೋತಿಯನ್ನು ಬೆಳಗುವ ಸಂಕೇತವೇ ಕಾರ್ತೀಕ ದೀಪೋತ್ಸವ ಸಂದೇಶ ಅಜ್ಞಾನವನ್ನು ದೂರ ಮಾಡಿ ಜ್ಞಾನವನ್ನು ಪ್ರತಿ ಹಂತದಲ್ಲಿ ಕಾಪಾಡಿಕೊಳ್ಳುವುದು ಎಲ್ಲರ ಧ್ಯೇಯವಾಗಬೇಕು ಎಂದು ಕೆ.ಅಯ್ಯನಹಳ್ಳಿ ಕೊಟ್ಟೂರು ಹಿರೇಮಠದ ಮಠಾಧ್ಯಕ್ಷ ಷ.ಬ್ರ.ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು ಶ್ರೀಗುರುಕರಿಲಿಂಗೇಶ್ವರ ಸ್ವಾಮೀಯ ಕಾರ್ತೀಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬದುಕನ್ನು ಗಂಭೀರವಾಗಿ ಪರಿಗಣಿಸದೇ ಕವಲು ದಾರಿಯತ್ತ ಸಾಗುವ ಯುವಕರು ತಮ್ಮೆಲ್ಲಾ ದುಷ್ಚಟಗಳಿಂದ ದೂರವಾಗಲು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸನ್ಮಾರ್ಗದ ಹಾದಿಯಲ್ಲಿ ಸಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಶ್ರೀಕರಿಲಿಂಗೇಶ್ವರ ಪ್ರಶಸ್ತಿಯನ್ನು ಗ್ರಾಮದ ಎಂ.ಟಿ.ಕೊಟ್ರೇಶ ಅವರಿಗೆ ಶ್ರೀಗಳು ನೀಡಿ ಗೌರವ ಸಲ್ಲಿಸಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಂ.ಜಿ.ಕೊಟ್ರೇಶ, ಹಾಲಿ ಸದಸ್ಯ ಎಂ.ಓ. ಸಿದ್ದಲಿಂಗಸ್ವಾಮಿ , ಎ.ಎಂ.ಓ ಕೊಟ್ರಯ್ಯ, ಎ.ಎಂ.ನಾಗರಾಜ, ಬಿ.ಎಂ.ಹಾಲಯ್ಯ, ಎಂ.ಯು.ಶೇಖರಯ್ಯ, ಎ.ಎಂ.ಜಿ.ಕರಿವೀರಯ್ಯ, ಎಂ.ಎಂ .ಬಿ. ವೀರಯ್ಯ, ಬಣಕಾರ ಶೇಖರಪ್ಪ, ಎಂ.ಎಂ. ನಾಗರಾಜಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here