ನೌಕರರ ಮುಷ್ಕರಕ್ಕೆ ಕೊಟ್ಟೂರು ಸ್ತಬ್ಧ

0
201

ಕೊಟ್ಟೂರು: ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೊಟ್ಟೂರು ತಾಲೂಕು ಕಚೇರಿ ಹಾಗೂ ಇತರೇ ಕಚೇರಿಗಳು ಬಿಕೋ ಎನ್ನುವ ಪರಿಸ್ಥಿತಿ ಒದಗಿತ್ತು. ಸಿಬ್ಬಂದಿ ಇಲ್ಲದೇ ಬಿಕೋ ಎನ್ನುತ್ತಿದ್ದವು ಮುಷ್ಕರದ ಮಾಹಿತಿ ತಿಳಿಯದೆ ಕಚೇರಿಗಳ ಮುಂದೆ ಕಾದು ಕುಳಿತಿದ್ದ ಗ್ರಾಮೀಣ ಪ್ರದೇಶದ ಜನರು ವಿಷಯ ತಿಳಿದು ವಾಪಾಸ್ಸಾಗುವ ದೃಶ್ಯ ಕಂಡುಬಂದಿತು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲ ವೈದ್ಯಕೀಯ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದು ತುರ್ತು ಚಿಕಿತ್ಸೆಗೆ ಮಾತ್ರ ಸ್ಪಂದಿಸುತ್ತಿದ್ದರು. ಹೊರ ರೋಗಿಗಳಿಗೆ ಯಾವುದೇ ಚಿಕಿತ್ಸೆ ದೊರೆಯದ ಕಾರಣ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಕಡೆ ಮುಖ ಮಾಡಿದರು.

ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಮುಷ್ಕರದ ಮಾಹಿತಿ ಮುಂಚಿತವಾಗಿ ತಿಳಿಸಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬಂದಿರಲಿಲ್ಲ. ಮಧ್ಯಾಹ್ನದ ವೇಳೆಗೆ ಮುಷ್ಕರ ವಾಪಾಸ್ ಪಡೆಯಲಾಗಿದೆ ಎಂದು ಗೊತ್ತಾದರೂ ನೌಕರರು ಮಾತ್ರ ಕರ್ತವ್ಯಕ್ಕೆ ಹಾಜರಾಗದೇ ಇರುವುದು ಬಹುತೇಕ ಕಡೆ ಕಂಡುಬಂದಿತು.

ಕೊಟ್
ಮಧ್ಯಾಹ್ನದ ಹೊತ್ತಿನ ವರೆಗೂ ನಡೆದ ಮುಷ್ಕರ ಶಾಂತಿಯುತವಾಗಿತ್ತು ಸರ್ಕಾರದ ಆದೇಶ ಜಾರಿಯಾದ ಕೂಡಲೇ ನೌಕರವರ್ಗ ಸಂಭ್ರಮಿಸಿದರು.ಎಂದು ಸಂತೋಷ ವ್ಯಕ್ತಪಡಿಸಿದರು ಸಿಮಾ ಗುರು ಬಸವರಾಜ್

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here