ಕೊಟ್ಟೂರು ತಾಲೂಕು ನೂತನ ತಹಶೀಲ್ದಾರ್ರಾಗಿ ಅಮರೀಶ್ ಜಾಲಹಳ್ಳಿ ಯವರು ಬುಧವಾರ ಇಲ್ಲಿನ ತಾಲೂಕು ಕಾರ್ಯಾಲಯದಲ್ಲಿ ವರ್ಗಾವಣೆಗೊಂಡು ಕುಮಾರಸ್ವಾಮಿಯಿಂದ ಪ್ರಭಾರ ಅಧಿಕಾರ ಸ್ವೀಕರಿಸಿದರು. ೨೦೧೧ರ ಕೆ.ಎ.ಎಸ್. ಅಧಿಕಾರಿ ತಂಡದ ಬ್ಯಾಚ್ನವರಾಗಿದ್ದು ಮೂಲತಃ ರಾಯಚೂರು ಜಿಲ್ಲೆಯವರಾದ ಕೆಎಎಸ್ ಗಿಂತ ಮೊದಲು ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಕೊಟ್ಟೂರು ತಾಲೂಕಿಗೆ ಪ್ರಭಾರಿ ತಹಶೀಲ್ದಾರರನ್ನಾಗಿ ಅಮರೀಶ್ ಜಾಲಹಳ್ಳಿ ಅವರನ್ನು ವಿಜಯನಗರ ಜಿಲ್ಲಾಧಿಕಾರಿಗಳು ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ವರದಿ: ಶಿವರಾಜ್ ಕನ್ನಡಿಗ