ಸುಟ್ಟ ಕೊಡಿಹಳ್ಳಿ ಗ್ರಾಮಕ್ಕೆ ಕರವೇ ಅಧ್ಯಕ್ಷರಾಗಿ ಕೂಡ್ಲಿಗಿ ಕೊಟ್ರೇಶ್ ಆಯ್ಕೆ

0
90

ಕೊಟ್ಟೂರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ಗುರುವಾರದಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಗ್ರಾಮೋಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ಕೂಡ್ಲಿಗಿ ಕೊಟ್ರೇಶ್ ಸುಟ್ಟ ಕೊಡಿಹಳ್ಳಿ ಗ್ರಾಮಕ್ಕೆ ಅದ್ಯಕ್ಷನ್ನಾಗಿ ಕರವೇ ಅಧ್ಯಕ್ಷ ಎಂ ಶ್ರೀನಿವಾಸ್ ಅವರು ಆಯ್ಕೆ ಮಾಡಿದ್ದಾರೆ.

ಕರವೇ ತಾಲೂಕು ಅಧ್ಯಕ್ಷರು ಮಾತನಾಡಿ ತಾಲೂಕಿನಾದ್ಯಂತ ಪ್ರತಿಗ್ರಾಮಕ್ಕೂ ಹೋಬಳಿಗೂ ಅಧ್ಯಕ್ಷರು ಸದಸ್ಯರುಗಳನ್ನು ನೇಮಿಸಿ, ಹೆಚ್ಚಿನ ಕರವೇ ವೇದಿಕೆ ಸಂಘಟನೆಯನ್ನು ಪ್ರಬಲಗೊಳಿಸುವುದು ನನ್ನ  ಉದ್ದೇಶ ಎಂದು ಪತ್ರಿಕೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪಿ ನಾಗರಾಜ್, ಎಂ ಮೂರ್ತಿ ಗಂಗಮ್ಮನಹಳ್ಳಿ, ಡಿ ಲಿಂಗರಾಜ್, ಕೆಂಚಪ್ಪ ಬಿ, ಸೋಮಶೇಖರ್ ವಕೀಲರು, ತಾಲೂಕಿನ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here