ಸುವಿಚಾರಗಳು ಸನ್ಮಾರ್ಗದಲ್ಲಿ ನಡೆಸಲಿವೆ,:ಶಿಕ್ಷಕ ವಿನಯ್

0
255

ಸಂಡೂರು: ಆ:17: ಸುವಿಚಾರಗಳು ಸನ್ಮಾರ್ಗದಲ್ಲಿ ನಡೆಸಲಿವೆ, ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ಮುಖ್ಯ ಶಿಕ್ಷಕ ವಿನಯ್, ಅವರು ಸಂಡೂರು ತಾಲೂಕಿನ ತಾಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾದ “ಸದ್ಭಾವನಾ ದಿನ” ಆಚರಣೆಯ ಕಾರ್ಯಕ್ರಮದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕರಾದ ವಿನಯ್ ಅವರು ಮಾತನಾಡಿ ಪ್ರಬಲ ರಾಷ್ಟವಾಗಲು ಮಕ್ಕಳಿಗೆ ಸದ್ಭಾವನೆ,ಸೌಹಾರ್ದತೆ,ಶಾಂತಿ, ಏಕತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಉತ್ತಮವಾಗಿದೆ ಒಳ್ಳೆಯ ನಡತೆಯಲ್ಲಿ ವಿದ್ಯಾರ್ಜನೆ ಮಾಡಿದ ಮಕ್ಕಳು ದೇಶದ ಆಸ್ತಿಯಾಗುವರು ಎಂದು ನುಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಆಗಸ್ಟ್ 20 ರಂದು ಮಾಜಿ ಪ್ರಧಾನ ಮಂತ್ರಿ ದಿ.ರಾಜೀವ್ ಗಾಂಧಿ ಅವರ ಜನ್ಮದಿನಾಚರಣೆ ಅಂಗವಾಗಿ “ಸದ್ಭಾವನಾ ದಿನ”ವಾಗಿ ಆಚರಿಸಲಾಗುತ್ತದೆ, ತಮ್ಮ ಆಡಳಿತ ಅವಧಿಯಲ್ಲಿ ಸೌಹಾರ್ದತೆಗೆ ವಿಶೇಷ ವಾಗಿ ಶ್ರಮಿಸಿದ ಕಾರಣಕ್ಕೆ ಅವರಿಗೆ ಗೌರವ ನೀಡುವ ಸಲುವಾಗಿ ಸದ್ಭಾವನಾ ದಿನ ಅಚರಿಸಿ, ಜಾತಿ,ಧರ್ಮ, ಪ್ರದೇಶ, ಮತ,ಭಾಷೆ, ಬೇಧಭಾವವಿಲ್ಲದೇ ಸೌಹಾರ್ದತೆಯಿಂದ, ಸಮಾಲೋಚನೆ ಹಾಗೂ ಸಂವಿಧಾನಾತ್ಮಕವಾಗಿ ಶಾಂತಿಯಿಂದ ಎಲ್ಲರೂ ಬಾಳುವ ಹಾಗೆ ಅವಕಾಶ ಮಾಡಿಕೊಡಬೇಕು ಎಮದು ತಿಳಿಸಿದರು, ಪ್ರತಿಜ್ಞೆಯನ್ನು ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಬೋಧಿಸಿದರು, ಎಲ್ಲರೂ ಪ್ರತಿಜ್ಞೆಯನ್ನು ಸ್ವೀಕರಿಸಿದರು,

ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಮಧುಕುಮಾರ್,ಬಸವರಾಜ್, ವಿದ್ಯಾರ್ಥಿಗಳಾದ ನಿಕಿಲ್,ಶಾಂತಿವೀದಿ, ರಾಹುಲ್,ವಿಜಯ್,ಅನ್ನಪೂರ್ಣ, ಸುಪ್ರೀತ್,ಪವನ್,ಚಮದ್ರು, ಕುಮಾರಸ್ವಾಮಿ,ಶಶಿಕಲಾ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here