ಸಂಡೂರು:- ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ವಿ.ಸಿ. ನಾನಾವಟೆ ಪದವಿ ವಿದ್ಯಾರ್ಥಿಗಳು, ಶ್ರೀಮತಿ ಲಕ್ಷ್ಮೀ.ಎಸ್. ನಾನಾವಟೆ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪುರಸಭೆ ಇಲಾಖೆಯ ಅಧಿಕಾರಿಗಳೊಂದಿಗೆ ಮಹಾತ್ಮಾಗಾಂಧೀಜಿ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾದ ಸ್ವಚ್ಛತಾ ಹೀ ಸೇವಾ ಅಭಿಯಾನದ ಆಶಯದಂತೆ ಸ್ವಚ್ಛತಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಬಳ್ಳಾರಿಯ ಯೋಜನಾ ನಿರ್ದೇಶಕರ ಕಛೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸುಧೀಂದ್ರ ಕುಮಾರ್, ಕಿರಿಯ ಅಭಿಯಂತರ ಅರುಣ ಪಾಟೀಲ್, ಪುರಸಭೆ ಮುಖ್ಯಾಧಿಕಾರಿಗಳಾದ ಜಯಣ್ಣ.ಕೆ ಪರಿಸರ ಅಭಿಯಂತರರಾದ ಅನ್ನಪೂರ್ಣ.ಡಿ, ವಸಂತ ಕುಮಾರ್ ಹಾಗೂ ಸಾರ್ವಜನಿಕರು ಕೂಡಿಕೊಂಡು ಸ್ಮಯೋರ್ ಕಾಲೋನಿಯ ಉದ್ಯಾನವನವನ್ನು ಸ್ವಚ್ಛಗೊಳಿಸಿದರು.