ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮ ದಿನಾಚರಣೆ

0
18

ಕೊಟ್ಟೂರು :ಪರಿಸರ ಪೋಷಣೆ ನಿರ್ಮಲ ಪಟ್ಟಣ ಗ್ರಾಮ ಗಳನ್ನು ಕಾಪಾಡಿಕೊಳ್ಳುವುದೇ ರಾಷ್ಟ್ರಪಿತ ರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಕೊಟ್ಟೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ ಹೇಳಿದರು.
ಸೋಮವಾರ ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಮಹಾತ್ಮಗಾಂಧಿ ಮತ್ತು ಲಾಲ್‌ ಬಹದ್ದೂರು ಶಾಸ್ತ್ರಿ ಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರುಗಳ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು.

ಸ್ವಯಂ ಪ್ರೇರಿತರಾಗಿ ಪರಿಸರವನ್ನು ಸ್ವಚ್ಛವಾಗಿಡುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು ಇದರ ಜೊತೆಗೆ ಪರಿಸರಕ್ಕೆ ಹಾನಿಕಾರಕವಾದ ವಾತಾವರಣವನ್ನು ಹೋಗಲಾಡಿಸಲು ಎಲ್ಲಾ ಕ್ರಮಕೈಗೊಳ್ಳುವತ್ತ ಮುಂದಾಗಬೇಕು ಎಂದ ಅವರು ರಾಷ್ಟ್ರಪಿತರ ಜನ್ಮದಿನದ ನಿಮಿತ್ತ ಪಟ್ಟಣದಲ್ಲಿ ನಿನ್ನೆಯಿಂದ ಪೌರಕಾರ್ಮಿಕರೊಂದಿಗೆ ಕಾರ್ಯಾಲಯ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸ್ವಚ್ಛತಾ ಆಂದೋಲನ ಕಾರ್ಯವನ್ನು ನಡೆಸಲಾಯಿತು ಎಂದು ಅವರು ಹೇಳಿದರು.

ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಕೆ.ಎಸ್. ವೀಣಾ ವಿವೇಕಾನಂದಗೌಡ , ಕೆಂಗರಾಜ, ಆರೋಗ್ಯ ನಿರೀಕ್ಷಕಿ ಅನುಷಾ , ಚಿಗಟೇರಿ ಕೇಶವ, ಪರಶುರಾಮ, ಬಸವರಾಜ, ವಿಜಯಕುಮಾರ, ಚಿಗಟೇರಿ ಪ್ರಕಾಶ್‌, ಮಂಜುಥಾ,ಕೊಟ್ರೇಶ್‌, ನಾಗರಾಜ, ಮಂಜುನಾಥ, ಲಕ್ಷ್ಮೀ, ರೇಣುಕಾ, ಗೌಡ ಮತ್ತಿತರರು ಭಾಗವಹಿಸಿದ್ದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here