ಉತ್ತಂಗಿ ರುದ್ರಮ್ಮ ಅನಾಥಾಶ್ರಮಕ್ಕೆ ಅಕ್ಕಿ ಬೇಳೆ ಸಾಮಗ್ರಿ ವಿತರಣೆ

0
148

ಕೊಟ್ಟೂರು: ಸುಜಲಾನ್ ಗ್ಲೋಬಲ್ ಸರ್ವಿಸ್ ಲಿಮಿಟೆಡ್ ಹಾಗೂ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕಾಲೇಜಿನ ಸಹಯೋಗದಲ್ಲಿ ಉತ್ತಂಗಿ ರುದ್ರಮ್ಮ ಅನಾಥಾಶ್ರಮಕ್ಕೆ ಅಕ್ಕಿ ಬೇಳೆ ಎಣ್ಣೆ ಮುಂತಾದ ಅಡುಗೆ ಸಾಮಾಗ್ರಿಗಳನ್ನು ಮಹಮದ್ ಆಸಿಫ್ ರವರ ಮುಂದಾಳತ್ವದಲ್ಲಿ ವಿತರಿಸಲಾಯಿತು.

ಉತ್ತಂಗಿ ರುದ್ರಮ್ಮ ರವರು ಹರ್ಷವನ್ನು ವ್ಯಕ್ತಪಡಿಸುತ್ತಾ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕಾಲೇಜಿನವರು ಯಾವಾಗಲೂ ನಮ್ಮ ಆಶ್ರಮಕ್ಕೆ ಸಹಾಯ ಮಾಡುತ್ತಾ ಒಳ್ಳೆ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಎಂದು ಅಭಿಪ್ರಾಯಪಟ್ಟರು.

ಈ ವೇಳೆಯಲ್ಲಿ ಶರವಪ್ಪ ಸಂಸ್ಕೃತ ಉಪನ್ಯಾಸಕರು ಮಹಾಜನ ವಿದ್ಯಾ ಸಂಸ್ಥೆ ಮೈಸೂರು ಇವರು  ಈ ಸತ್ಕಾರ್ಯಕ್ಕೆ ಅಭಿನಂದಿಸಿ ಸಕ್ರಿಯವಾಗಿ ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀ ಹರ್ಷ, ಸತೀಶ್ ಪಾಟೀಲ್, ಸತೀಶ್ ಆರ್, ಸಿದ್ದಾರ್ಥ್ ವಿ ಎಸ್, ನಾಗರಾಜ್ ಬಿ, ಶರಬಪ್ಪ ನಿವೃತ್ತ ಸಂಸ್ಕೃತ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಇದ್ದರು.

LEAVE A REPLY

Please enter your comment!
Please enter your name here