ಮಂಪ್ಸ್ ಅಥವಾ ಗದ್ದಮ್ಮ ಕುರಿತು ಬಾಲವಿಕಾಸ ಕೇಂದ್ರದಲ್ಲಿ ಜಾಗೃತಿ

0
139

ಸಂಡೂರು: ನ: 21: ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಬಾಲ ವಿಕಾಸ ಕೇಂದ್ರದಲ್ಲಿ ಶಿಕ್ಷಕರು ಮತ್ತು ಮಕ್ಕಳಿಗೆ ಮಂಪ್ಸ್ ಅಥವಾ ಗದ್ದಮ್ಮ ಕುರಿತು ಜಾಗೃತಿ ಮೂಡಿಸಲಾಯಿತು, ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಕುಡಿಯುವ ನೀರು,ತಿಂಡಿ ತಿನಿಸುಗಳನ್ನು ಒಬ್ಬರಿಗೊಬ್ಬರು ಹಂಚಿ ಕೊಳ್ಳ ಬಾರದು,ಜ್ವರ ಅಥವಾ ಮೈ ಬಿಸಿಯಾದರೆ, ಕುತ್ತಿಗೆ ಭಾಗದಲ್ಲಿ ನೋವು, ನೀರು ಕುಡಿಯಲು ಕುತ್ತಿಗೆಯಲ್ಲಿ ನೋವು ಕಂಡು ಬಂದರೆ,ಗದ್ದ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಟೀಚರ್ ಅಥವಾ ತಾಯಿಗೆ ತಕ್ಷಣ ತಿಳಿಸಬೇಕು,ನಂತರ ಪೋಷಕರಿಗೆ ತಿಳಿಸಿ ವೈದ್ಯರ ಬಳಿಗೆ ತಪಾಸಣೆಗೆ ಕಳಿಸಬೇಕು, ಶಿಕ್ಷಕಿ ಮತ್ತು ಸಹಾಯಕಿಯರು ಮಕ್ಕಳಿಗೆ ಆಗಾಗ ಸೋಪಿನಿಂದ ಕೈತೊಳೆಸಬೇಕು, ಅರೋಗ್ಯ ಇಲಾಖೆಯ ಸಂಪರ್ಕದಲ್ಲಿದ್ದು, ಹಾಗೇ ಸಾರ್ವತ್ರಿಕ ಲಸಿಕಾಕರಣ ಸಂಪೂರ್ಣ ಹಾಕಿಸಿದ ಬಗ್ಗೆ ಖಾತ್ರಿ ಮಾಡಿಕೊಳ್ಳುವಂತೆ ತಿಳಿಸಿದರು,ನಂತರ ಮಕ್ಕಳ ಆರೋಗ್ಯ ವಿಚಾರಿಸಲಾಯಿತು,

ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಭಾಗ್ಯ ಲಕ್ಷ್ಮಿ, ಶಿಕ್ಷಕಿ ನೀಲಮ್ಮ, ಸುನೀತಾ,ಸಹಾಯಕಿ ನಾಗವೇಣಿ,ಪೋಷಕ ವೀರೇಶ್ ಮತ್ತು ಮಕ್ಕಳು ಇದ್ದರು

LEAVE A REPLY

Please enter your comment!
Please enter your name here