ಕೊಟ್ಟೂರು : ಪಟ್ಟಣದಲ್ಲಿ ಗಂಗಾಮತ ಸಮಾಜ ಸಂಘ (ರಿ ) ವತಿಯಿಂದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ 904ನೇ ಜಯಂತಿ ಅಂಗವಾಗಿ ಶ್ರೀ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು ಈ ಮೆರವಣಿಗೆಯು ಮಾಡ್ದೆರ್ ಕಾಲೋನಿಯ ದುರ್ಗಪರಮೇಶ್ವರಿ ದೇವಸ್ಥಾನ ಮೂಲಕ ಚಾಲನೆಗೊಂಡು ಅದ್ದೂರಿಯಾಗಿ ಕಲಾ ತಂಡದೊಂದಿಗೆ ನಂದಿ ಕೋಲು ಕುಣಿತ, ತಬಲಾ, ಡ್ರಮ್ ಸೆಟ್, ಬಾರಿಸುವ ಮೂಲಕ ಪ್ರಮುಖ ರಸ್ತೆ ಮಾರ್ಗವಾಗಿ ನಡೆದು ಸಾಗಿತು ಈ ಮೆರವಣಿಗೆಯಲ್ಲಿ ಗಂಗಾಮತ ಸಮಾಜದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಯುವಕರು ಭಾಗವಹಿಸಲಾಯಿತು ಮತ್ತು ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಆಯೋಜಕರಾದ. ನಾಗಲಿಂಗಪ್ಪ, ಗೋಣೆಪ್ಪ, ಬಿ. ರಂಗನಾಥ್, ಕೊಟ್ರೇಶಪ್ಪ, ನೀಲಪ್ಪ, ರೇಣುಕಪ್ಪ, ರಮೇಶ್, ತಿಮ್ಮಣ್ಣ, ಮುಂತಾದವರು ಇದ್ದರು.
ವರದಿ: ಶಿವರಾಜ್ ಕನ್ನಡಿಗ