ಅದ್ದೂರಿಯಾಗಿ ನಡೆದ 904 ನೇ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಮೆರವಣಿಗೆಯ ಆಚರಣೆ

0
58

ಕೊಟ್ಟೂರು : ಪಟ್ಟಣದಲ್ಲಿ ಗಂಗಾಮತ ಸಮಾಜ ಸಂಘ (ರಿ ) ವತಿಯಿಂದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ 904ನೇ ಜಯಂತಿ ಅಂಗವಾಗಿ  ಶ್ರೀ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ   ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು ಈ ಮೆರವಣಿಗೆಯು ಮಾಡ್ದೆರ್ ಕಾಲೋನಿಯ ದುರ್ಗಪರಮೇಶ್ವರಿ  ದೇವಸ್ಥಾನ ಮೂಲಕ  ಚಾಲನೆಗೊಂಡು ಅದ್ದೂರಿಯಾಗಿ ಕಲಾ ತಂಡದೊಂದಿಗೆ ನಂದಿ ಕೋಲು ಕುಣಿತ, ತಬಲಾ, ಡ್ರಮ್ ಸೆಟ್, ಬಾರಿಸುವ ಮೂಲಕ ಪ್ರಮುಖ ರಸ್ತೆ ಮಾರ್ಗವಾಗಿ ನಡೆದು ಸಾಗಿತು ಈ ಮೆರವಣಿಗೆಯಲ್ಲಿ ಗಂಗಾಮತ ಸಮಾಜದ  ನೂರಾರು ಸಂಖ್ಯೆಯಲ್ಲಿ  ಮಹಿಳೆಯರು ಮತ್ತು ಯುವಕರು  ಭಾಗವಹಿಸಲಾಯಿತು ಮತ್ತು  ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು  ಮಾಡಲಾಯಿತು. ಈ ಸಂದರ್ಭದಲ್ಲಿ ಆಯೋಜಕರಾದ. ನಾಗಲಿಂಗಪ್ಪ, ಗೋಣೆಪ್ಪ, ಬಿ. ರಂಗನಾಥ್,  ಕೊಟ್ರೇಶಪ್ಪ, ನೀಲಪ್ಪ, ರೇಣುಕಪ್ಪ, ರಮೇಶ್, ತಿಮ್ಮಣ್ಣ, ಮುಂತಾದವರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here