ಸರ್ಕಾರದ ವಿವಿಧ ಯೋಜನೆಗಳ ಕುರಿತು ಜಾಗೃತಿ ಕಾರ್ಯಕ್ರಮ

0
34

ಹೊಸಪೇಟೆ: ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕನ್ನನಾಯಕನಹಳ್ಳಿ ಹಾ ಗೂ ಚಿಕ್ಕಮೇಗಳಗೆರೆ ಗ್ರಾಮಗಳಲ್ಲಿ ಜನನಿ ಪುಷ್ಪಕಲಾ ಯುವಕ ಸಂಗಮ ಕಲಾವಿದರು ಜಾನಪದ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು. ಜಿಲ್ಲೆಯಲ್ಲಿ ಸರಕಾರದ ನಾನಾ ಯೋಜನೆಗಳ ಕುರಿತು ಮಾಹಿತಿ ಮತ್ತು ನಾಗರಿಕ ಸಂಪರ್ಕ ಇಲಾಖೆ ಮೂಲಕ ಪರಿಸರ ಸಂರಕ್ಷಣೆ, ನೈರ್ಮಲ್ಯ ಹಾಗೂ ನಾನಾ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ.

ಫೆ.20ರಂದು ತೆಲಗಿ ಮತ್ತು ನಂದಿಬೇವೂರು ಗ್ರಾಮಗಳಲ್ಲಿ, 21ರಂದು ಹುನಹಳ್ಳಿ ಮತ್ತು ಪೈಗನೂರು, 22ರಂದು ನಾರಾಯಣಪುರ ಮತ್ತು ಬಾವಿಹಳ್ಳಿ ಹಾಗೂ 23ರಂದು ಮೈದೂರಿನಲ್ಲಿ ಪುಷ್ಪಕಲಾ ಯುವಕ ಸಂಗಮದ ಪ್ರತಿಭಾವಂತ ಕಲಾವಿದರಿಂದ ಜಾನಪದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.

ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಅಗತ್ಯ ಸಹಕಾರ ನೀಡುವಂತೆ ವಿಜಯನಗರ ಜಿಲ್ಲಾ ವಾರ್ತಾ ನಾಗರಿಕ ಸಂಬಂಧ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಕೋರಿದ್ದಾರೆ.

LEAVE A REPLY

Please enter your comment!
Please enter your name here