ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಸಭೆ

0
207

ಶಿವಮೊಗ್ಗ, ಜುಲೈ-29. ಜಿಲ್ಲಾ ಕರ್ನಾಟಕ ಲೋಕಾಯುಕ್ತ ಪೋಲಿಸ್ ಅಧಿಕಾರಿಗಳು ಆಗಸ್ಟ್-2020ರ ಮಾಹೆಯಲ್ಲಿ ಈ ಕೆಳಕಂಡ ದಿನಗಳಂದು ಸಾರ್ವಜನಿಕರಿಂದ ಕುಂದು ಕೊರತೆ ಬಗ್ಗೆ ಅಹವಾಲು ಸ್ವೀಕರಿಸುವರು.
ಲೋಕಾಯುಕ್ತ ಅಧಿಕಾರಿಗಳು ಆಯಾ ದಿನಗಳಂದು ನಿಗದಿಪಡಿಸಿದ ತಾಲೂಕು ಕೇಂದ್ರದ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ವಿಳಂಬ ಹಾಗೂ ನಿರ್ಲಕ್ಷ್ಯ ತೋರುವ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಸಾರ್ವಜನಿಕರಿಂದ ಲಿಖಿತ ದೂರು ಪಡೆಯುವರು. ಆಗಸ್ಟ್-04 ರಂದು ಹೊಸನಗರ, ಆಗಸ್ಟ್-07 ರಂದು ತೀರ್ಥಹಳ್ಳಿ, ಆಗಸ್ಟ್-13 ರಂದು ಸೊರಬ, ಆಗಸ್ಟ್-18 ರಂದು ಸಾಗರ, ಆಗಸ್ಟ್-25 ರಂದು ಶಿಕಾರಿಪುರ ಹಾಗೂ ಆಗಸ್ಟ್-28 ರಂದು ಭದ್ರಾವತಿಯ ಮಿಲಿಟರಿ ಕ್ಯಾಂಪ್‍ನ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸುವರು ಎಂದು ಜಿಲ್ಲಾ ಕರ್ನಾಟಕ ಲೋಕಾಯುಕ್ತ ಪೋಲಿಸ್ ಉಪಾಧೀಕ್ಷಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here