ಕೊಟ್ಟೂರು ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ರಂದು ಬೆಳಿಗ್ಗೆ 8.00 ಗಂಟೆಗೆ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಅದ್ದೂರಿಯಾಗಿ ದ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕೊಟ್ಟೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ ಇವರು ಕನ್ನಡ ರಾಜ್ಯೋತ್ಸವ ಸಂಭ್ರಮದ ಐವತ್ತನೇ ದಿನ ಕೆಂಪುಹಳದಿಯ ಬಣ್ಣಗಳೇ ಎಲ್ಲೆಡೆ ರಾರಾಜಿಸುವ ಕನ್ನಡದ ಬಾವುಟಗಳನ್ನು ನೋಡಲು ಎರಡು ಕಣ್ಣುಗಳೇ ಸಾಲದು, ಕನ್ನಡ ಕರುಣೆಯ ನಿಘಂಟು ಎನ್ನುವುದನ್ನು ಸಾಕ್ಷೀಕರಿಸಲು ಅನೇಕ ಕನ್ನಡದ ಮಹಾನ್ ಸಾಹಿತಿಗಳ ಸಾಹಿತ್ಯವೇ ಇದಕ್ಕೆ ಮಹಾನ್ ಸಾಕ್ಷಿ! ಎಂದು ಮಾತನಾಡಿ ಹೇಳಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಹೆಚ್.ವಿನಯ್ ಕುಮಾರ್, ಮರಬದ ಕೊಟ್ರೇಶ್, ಟಿ.ರಾಮಣ್ಣ,ಎ. ತಿಪ್ಪೇಸ್ವಾಮಿ, ಎಂ.ಸಿ.ಕೆಂಗಪ್ಪ, ಶಿವಾನಂದ, ಜಿ.ಸಿದ್ದಯ್ಯ, ವೀಣಾ ವಿವೇಕಾನಂದಗೌಡ್, ಷಫಿ, ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.