ಸಕಾಲ ಸಪ್ತಾಹದ ಮೇಲ್ವಿಚಾರಣೆ

0
101

ದಾವಣಗೆರೆ ಡಿ.10 -ಸರ್ಕಾರದ ಸೂಚನೆಯಂತೆ ಡಿ.7 ರಿಂದ 11 ರವರೆಗೆ ಜಿಲ್ಲೆಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆಯಲ್ಲಿ ಒಂದು ವಾರ ಕಾಲ ಸಕಾಲ ಸಪ್ತಾಹ ಆಚರಿಸಲಾಗಿದ್ದು, ಈ ಸಂಬಂಧ ಜಿಲ್ಲೆಯ ಸಕಾಲ ಸಪ್ತಾಹದ ಮೇಲ್ವಿಚಾರಣೆ ನಡೆಸುವ ಸಲುವಾಗಿ ಗುರುವಾರ ವರಪ್ರಸಾದ ರೆಡ್ಡಿ, ಅಪರ ಮಿಷನ್ ನಿರ್ದೇಶಕರು-2, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಇ-ಆಡಳಿತ), ಸಕಾಲ ಮಿಷನ್, ಬೆಂಗಳೂರು ಇವರು ಜಿಲ್ಲಾ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.
ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಮತ್ತು ಹಳೇಬಾತಿ ಗ್ರಾ.ಪಂ, ಹರಿಹರ ತಾಲ್ಲೂಕಿನ ಬೆಳ್ಳೂಡಿ ಮತ್ತು ಹನಗವಾಡಿ ಗ್ರಾ.ಪಂಗಳಿಗೆ ಭೇಟಿ ನೀಡಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನೀಡಲಾಗುವ ಸಕಾಲ ಸೇವೆಗಳ ಪ್ರಗತಿ, ಸಕಾಲ ಫಲಕಗಳು ಮತ್ತು ಸಕಾಲ ಸಪ್ತಾಹದ ಪರಿಶೀಲನೆ ನಡೆಸಿದರು.
ಈ ವೇಳೆ ಹರಿಹರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗಂಗಾಧರನ್, ದಾವಣಗೆರೆ ತಾ.ಪಂ ಸಹಾಯಕ ನಿರ್ದೇಶಕ ಮಂಜುನಾಥ ಕೆ.ಹೆಚ್ ಇದ್ದರು.

LEAVE A REPLY

Please enter your comment!
Please enter your name here