ವಿಜಯನಗರ/ಕೊಟ್ಟೂರು: ಮೇ 18-
ಕೊಟ್ಟೂರು ತಾಲೂಕು, ಕಾಳಪುರ ಗ್ರಾಮ ಗ್ರಾಮದಲ್ಲಿ ಇಂದು ಕಣ್ಣಿನ ನಡೆ ಹಳ್ಳಿಯ ಕಡೆಗೆ ಶೀರ್ಷಿಕೆಯೊಂದಿಗೆ ಕೊಟ್ಟೂರಿನ ಕಠಾರೆ ಆಪ್ಟಿಕಲ್ ಸಹಯೋಗದೊಂದಿಗೆ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡ
ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರವನ್ನು ಗ್ರಾಮ ಪಂಚಾಯತಿಯ ಅದ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉದ್ಘಾಟಿಸಿ ಮಾತನಾಡಿ ಕೆಳಸ್ತರದಲ್ಲಿ ಜೀವಿಸುವ ಜನರಿಗೆ ಇಂತಹ ಕಾರ್ಯಕ್ರಮಗಳು ಬಹಳ ಉಪಯೋಗವಾಗಿವೆ ಎಂದು ತಿಳಿಸುತ್ತ ಕಾರ್ಯಕ್ರಮವನ್ನು ಸಮಾಜಮುಖಿ ಚಿಂತನೆಯೊಂದಿಗೆ ಯೋಜನಾಬದ್ದವಾಗಿ ರೂಪಿಸಲು ಮತ್ತು ಪ್ರಚಾರ ಮಾಡಲು ಸಹಕರಿಸಿದ ಎಲ್ಲರಿಗೂ ಚಿರಋಣಿ ಎಂದರು. ಕಾರ್ಯಕ್ರಮದಲ್ಲಿ ಕಠಾರೆ ಆಪ್ಟಿಕಲ್ ನ ಮುಖ್ಯಸ್ಥರಾದ ಮೋಹನ್ ಸಿ ಎ, ಹಾಗೂ ಸಿಬ್ಬಂದಿಗಳಾದ ಕಿರಣ್, ರವಿಕುಮಾರ್, ಅನಿಲ್ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಂ.ನಿಂಗಮ್ಮ, ಉಪಾಧ್ಯಕ್ಷ ಮಂಜುನಾಥ ಪೂಜಾರ, ಪಿಡಿಓ ಲತಾಬಾಯಿ, ಸದ್ಯರುಗಳಾದ ಬಿ.ಸುರೇಶ, ನಾಗಪ್ಪ ಕನ್ನಾಕಟ್ಟೆ, ಭರಮಪ್ಪ, ನಾಗಪ್ಪ ಹೆಚ್, ಮುಖಂಡರಾದ ಕೆ.ಸಿದ್ದೇಶ, ನರಸಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.
ವರದಿ: ಶಿವರಾಜ್ ಕನ್ನಡಿಗ