ಕೆರೆಗಳ ಒತ್ತವರಿ ತೆರವುಗೊಳಿಸುವಂತೆ ಸೂಚನೆ

0
107

ಹಾಸನ ಜ.4 : ನಗರ ಪ್ರದೇಶಗಳಲ್ಲಿರುವ ಕೆರೆಗಳನ್ನು ಸರ್ವೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ ಒತ್ತುವರಿಗಳಿದ್ದಲ್ಲಿ ತೆರವುಗೊಳಿಸಿ ಮಲಿನ್ಯವಾಗದಂತೆ ಕ್ರಮ ವಹಿಸಿ ಮಾಹಿತಿ ನೀಡಬೇಕೆಂದು ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದರು.

ಜಿಲ್ಲಾಧಿಕಾರಿಗಳೊಂದಿಗೆ ಕೆರೆ ಸಂರಕ್ಷಣೆ  ಮತ್ತು ಅಬಿವೃದ್ಧಿ ಪ್ರಾಧಿಕಾರ ಅಫೆಕ್ಸ್ ಸಮಿತಿಯ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಅಲ್ಲದೆ ಸಣ್ಣ ನೀರಾವರಿ,  ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಕೆರೆಗಳ ಸಂಖ್ಯೆಯನ್ನು ನಿಖರ  ಮಾಹಿತಿಯನ್ನು ಕ್ರೂಢೀಕರಿಸಿ ಸರ್ವೆ ನಡೆಸಿ ಗಡಿ ನಿರ್ಧರಿಸಿ, ಒತ್ತುವರಿ ತೆರವುಗೊಳಿಸಿ ವರದಿ ನೀಡಬೇಕೆಂದು ಮಹೇಂದ್ರ ಜೈನ್ ತಿಳಿಸಿದರು.

ಪಟ್ಟಣಗಳಲ್ಲಿ ಇರುವಂತಹ ಕೆರೆಗಳು ಅತಿಕ್ರಮಣ ಮುಕ್ತಗೊಳಿಸಿ ಮಾಲಿನ್ಯ ಮುಕ್ತವಾಗಿರಬೇಕು ಹಾಗೂ ಅವುಗಳ ಕ್ರಿಯಾಯೋಜನೆಗಳು ಏನಿದೆ ಅವುಗಳ ಮಾಹಿತಿಯನ್ನು ನೀಡಬೇಕೆಂದು ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಆರ್ ಗಿರೀಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ, ಭೂದಾಖಲೆಗಳ ಉಪನಿರ್ದೇಶಕರು ಹೇಮಲತಾ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ್ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here