ಬಳ್ಳಾರಿ,ಜ.30 : ಯುವ ಉದ್ಯೋಗ ಆಕಾಂಕ್ಷಿಗಳಿಗಾಗಿ ಬಳ್ಳಾರಿ ಆಕಾಶವಾಣಿ ಕೇಂದ್ರದಲ್ಲಿ(ಎಫ್ಎಂ 103.3ಎಂಎಚ್ಝಡ್) ಜ.31ರಂದು ಅಂದರೇ ಇದೇ ಭಾನುವಾರ ಬೆಳಗ್ಗೆ 7.15ಕ್ಕೆ ಬಳ್ಳಾರಿ ಜಿಪಂ ಸಿಇಒ ಮತ್ತು 201ನೇ ಸಾಲಿನ ಯುಪಿಎಸ್ಸಿಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಕೆ.ಆರ್.ನಂದಿನಿ ಅವರ ಸಂದರ್ಶನ ಪ್ರಸಾರವಾಗಲಿದೆ.
ಯುವ ಉದ್ಯೋಗ ಆಕಾಂಕ್ಷಿಗಳಿಗಾಗಿ ಯುಪಿಎಸ್ಸಿ ಸ್ಪರ್ಧಾಕಾಂಕ್ಷಿಗಳಿಗೆ ಪರೀಕ್ಷೆ ಸಿದ್ಧತೆ ಕುರಿತು ಸಲಹೆ ಸೂಚನೆಗಳನ್ನು ನೀಡಲಿದ್ದು, ಯುವ ಕೇಳುಗರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.
ಎಫ್ಎಂ 103.3ಎಂಎಚ್ಝಡ್ ಅಥವಾ ಆ್ಯಂಡ್ರಾಯ್ಡ್ ಮೊಬೈಲ್ ಮೂಲಕವು ಆಲಿಸಬಹುದಾಗಿದ್ದು, ಪ್ರಸಾರ ಭಾರತಿ ನ್ಯೂಸ್ ಆನ್ ಏರ್ ಆ್ಯಪ್ ಮೂಲಕವೂ ಕೇಳಬಹುದಾಗಿದೆ. ಫೆಬ್ರುವರಿ 1ರಂದು ಬೆಳಗ್ಗೆ 7.15ಕ್ಕೆ ಮರುಪ್ರಸಾರವಾಗಲಿದೆ ಎಂದು ಬಳ್ಳಾರಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ತಿಮ್ಮಪ್ಪಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.