ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಫೆ6ರಂದು.ಕರ್ನಾಟಕ ಪತ್ರಕರ್ತರ ಸಂಘದ ಕೂಡ್ಲಿಗಿ ಅಧ್ಯಕ್ಷ ಬೆಳ್ಳಗಟ್ಟೆ ಕೃಷ್ಣಪ್ಪರಿಗೆ,ಕರ್ನಾಟಕ ಪತ್ರಕರ್ತರ ಸಂಘದಿಂದ 15000/- ರೂ ಮೊತ್ತವನ್ನು ಆರೋಗ್ಯ ಚಿಕಿತ್ಸೆಗೆಂದು ಸಹಾಯ ಧನ ನೀಡಲಾಯಿತು.
ಕೂಡ್ಲಿಗಿ ತಾಲೂಕಿನ ಹಿರಿಯ ಪತ್ರಕರ್ತ ಬೆಳ್ಳಗಟ್ಟೆ ಕೃಷ್ಣಪ್ಪನವರು,ದವಡೆ
ಕ್ಯಾನ್ಸರ್ ನಿಂದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.ಅವರ ಔಷಧೋಪಚಾರಕ್ಕಾಗಿ ಅವರಿಗೆ ಸಹಾಯಾರ್ಥವಾಗಿ ಹಣವನ್ನು ನೀಡಲಾಗಿದೆ,ಕ.ಪ.ಸಂಘದ ರಾಜ್ಯಧ್ಯಕ್ಷರಾದ ಮುರುಗೇಶ ಶಿವಪೂಜೆ ರವರ ಸೂಚನೆಯಂತೆ,ಸಂಘಟನೆಯ ಆರೋಗ್ಯ ನಿಧಿಯಿಂದ ನೀಡಲ್ಪಡುವ ಸಹಾಧನ ಇದಾಗಿದೆ.
ಕರ್ನಾಟಕ ಪತ್ರಕರ್ತರ ಸಂಘದ ಪರವಾಗಿ ಕೃಷ್ಣಪ್ಪರಿಗೆ 15000/-ರೂ ನಗದು ಹಣ ನೀಡಲಾಯಿತು,ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರು ಹಾಗೂ ಸಂಡೂರು ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ,ಗೋಪಾಲ್ ಹಾಗೂ ವಿ.ಜಿ.ವೃಷಭೇಂದ್ರ ಸೇರಿದಂತೆ.ಪತ್ರಕರ್ತರಾದ ಕೆ.ಎಸ್.ಮುರುಳೀಧರ ಶೆಟ್ಟ್ರು,ಬಡಿಗೇರ ನಾಗರಾಜ,ಬಾಣದ ಶಿವಮೂರ್ತಿ,ಎಲೆ ನಾಗರಾಜ, ನಂದಿಶ್ ನಾಯಕ,ರಾಜಶೇಖರ,ಇಬ್ರಾಹಿಂ ಖಲೀಲ್, ಈರಣ್ಣ, ಜೂಗುಲರ ಸೊಲ್ಲೇಶ,
ಸಮಾಜ ಸೇವಕ ನಾಣ್ಯಾಪುರ ಮಲ್ಲಪ್ಪ ಮುಂತಾದವರಿದ್ದರು.
ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
9008937428.