ಅಜೀಂ ಪ್ರೇಮ್ ಜೀ ಫೌಂಡೇಷನ್, ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಇವರ ಸಹಯೋಗದೊಂದಿಗೆ ಕೋವಿಡ್ ಜಾಗೃತಿ ಅಡಿಯಲ್ಲಿ ಇಂದು ಸಂಡೂರು ಪಟ್ಟಣ, ಧರ್ಮಪುರ, ಶೀನಿಬಸಪ್ಪ ಕ್ಯಾಂಪ್, ಲಕ್ಷ್ಮಿಪುರ, ನಂದಿಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು
ಈ ಸಂದರ್ಭದಲ್ಲಿ ಡಾ.ಭರತ್ ಕುಮಾರ್ ಮಾತನಾಡಿ ಮೂರನೆ ಅಲೆ ಪ್ರಾರಂಭಕ್ಕೂ ಮುನ್ನ ಹದಿನೆಂಟು ವರ್ಷ ವಯಸ್ಸಿನ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದಲ್ಲಿ ಮಕ್ಕಳಿಗೆ ಸೋಂಕು ತಗುಲುವ ಅಪಾಯ ಕಡಿಮೆಯಾಗುವುದು ಅದಕ್ಕಾಗಿ ಯಾವುದೇ ಸಂದೇಹ ಪಡದೇ ಸ್ವಯಂ ಪ್ರೇರಿತವಾಗಿ ಬಂದು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು,
ಕೋವಿಡ್ ಲಸಿಕೆ ಜಾಗೃತಿ ಅಂಗವಾಗಿ ಪಟ್ಟಣದ ವಿಜಯಸರ್ಕಲ್ ಮತ್ತು ವಾರ್ಡ್ ಗಳಲ್ಲಿ ವಾಹನದೊಂದಿಗೆ ಪ್ರಚಾರ ಮಾಡಲಾಯಿತು,
ಈ ಸಂದರ್ಭದಲ್ಲಿ ಡಾ.ಭರತ್ ಕುಮಾರ್, ಆರೋಗ್ಯ ನಿರೀಕ್ಷಕ ಬಂಡೇಗೌಡ, ವಿಜಯಲಕ್ಷ್ಮಿ, ಸಾಗರ್ ಕುಮಾರ್, ನಾಗಭೂಷಣ್, ಆಶಾ ಕಾರ್ಯಕರ್ತೆ ಜಲಜಾಕ್ಷಿ, ಯೋಗೇಶ್ವರಿ, ಲಕ್ಷ್ಮೀದೆವಿ,ಅಶ್ವಿನಿ, ಸುಮಿತ್ರಾ, ಚಂದ್ರಮ್ಮ, ವಿಜಯಲಕ್ಷ್ಮಿ, ಮಂಜುಳ ಇತರರು ಇದ್ದರು