ಸಂಡೂರು:ಅ:29:- ಹಲವು ತಿಂಗಳುಗಳ ಹಿಂದೆ ಚಿತ್ರಕಲಾ ಪರಿಷತ್ ನಲ್ಲಿ ಸುಧೀರ್ ಶೆಟ್ಟಿ ಅವರು ಸಂಡೂರು ಸುತ್ತಾ ಮುತ್ತಾ ಗಣಿಪ್ರದೇಶಗಳಿಂದ ಹಾಗೂ ಗಣಿಗಾರಿಕೆ ನಡೆಸುತ್ತಿರುವುದರಿಂದ ಸಾರ್ವಜನಿಕರ ನಿತ್ಯ ಜೀವನದ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮಗಳ ಛಾಯಾ ಚಿತ್ರಗಳ ಪ್ರದರ್ಶನವನ್ನು ಪ್ರೊ ನಿಸಾರ್ ಅಹಮದ್ ಹಾಗೂ ಎಸ್ ಆರ್ ಹಿರೇಮಠ್ ಅವರು ಉದ್ಗಾಟಿಸಿದ್ದರು
ಅ ಕಾರ್ಯಕ್ರಮದ ಸಂಧರ್ಭದಲ್ಲಿ ಪ್ರೊ ನಿಸಾರ್ ಅಹಮದ್ ಅವರಿಗೆ ಕನ್ನಡ ಮಣ್ಣಿನ ಬಗ್ಗೆ ಇರುವ ಕಾಳಜಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಸ್ಕಂದಸಿರಿ ನಾಡು ಸಂಡೂರು ಹಾಗೂ ಸುತ್ತಮುತ್ತಲಿನ ಪರಿಸರದ ಪ್ರದೇಶದ ಬಗ್ಗೆ ಅವರಿಗಿರುವ ಕಾಳಜಿಯ ಬಗ್ಗೆ ಸ್ಥಳೀಯರಾದ ನಾವುಗಳು ನಮ್ಮ ಸಂಡೂರು ತಾಲೂಕಿನಲ್ಲಿ ಗಣಿಪ್ರದೇಶಗಳಿಂದ ಹಾಗುತ್ತಿರುವ ತೊಂದರೆಗಳ ಬಗ್ಗೆ ಮುಂದಿನ ಪೀಳಿಗೆಗಳ ಜೀವನಗಳ ಹಿತದೃಷ್ಟಿಯಿಂದ ನಮ್ಮ ನೆಲ ಕನ್ನಡದ ನೆಲ ಜಲ ಖನಿಜ ಸಂಪನ್ಮೂಲಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ ಕನ್ನಡದ ಸಂಪನ್ಮೂಲಗಳ ಬಗ್ಗೆ ಕನ್ನಡಿಗರಿಗೆ ಜಾಗೃತಿ ಮೂಡಿಸೋಣ..