ಸಂಡೂರು/:ನ:17:-ಸಂಡೂರು ಪಟ್ಟಣದ ಪುರಸಭೆಯಲ್ಲಿ ಜಿಲ್ಲಾ ಪಂಚಾಯತ್ ಬಳ್ಳಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ/,ಸರ್ವೇಕ್ಷಣ ಘಟಕ ಬಳ್ಳಾರಿ ಹಾಗೂ (ಎನ್.ಪಿ.ಸಿ.ಡಿ.ಸಿ.ಎಸ್) ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಸಂಡೂರು ಇವರುಗಳ ಸಹಯೋಗದಲ್ಲಿ 2021 ರ ವಿಶ್ವ ಮಧುಮೇಹ ದಿನಾಚರಣೆ ಜಾಗೃತಿ
ಕಾರ್ಯಕ್ರಮವನ್ನು ಸಂಡೂರು ಸಾರ್ವಜನಿಕ ಆಸ್ಪತ್ರೆಯ ಎನ್.ಸಿ.ಡಿ.ವಿಬಾಗದಿಂದ ಪುರಸಭೆಯ ಸಿಬ್ಬಂದಿಗಳಿಗೆ ಮಧುಮೇಹ ದಿನದ ಅಂಗವಾಗಿ ಉಚಿತ ಮಧುಮೇಹ ಹಾಗೂ ಡೆಂಟಲ್ ತಪಾಸಣ ಶಿಬಿರವನ್ನು ಆಯೋಜಿಸಿದ್ದರು
ಶಿಬಿರದಲ್ಲಿ ಡಾ.ಅಪ್ರೋಜ್ ಬಾನು ಅವರು ಮಾತನಾಡುತ್ತಾ ನಮ್ಮ ದೇಶ ಮಧುಮೇಹದ ರಾಜಧಾನಿಯಾಗುವ ಕಡೆಗೆ ಮುನ್ನುಗ್ಗುತ್ತಿದೆ, ಮಧುಮೇಹ ಟೈಪ್-1 ಅನುವಂಶಿಕವಾಗಿ ಮಕ್ಕಳಲ್ಲಿ ಕಂಡು ಬರುತ್ತದೆ ಇವರಿಗೆ ಇನ್ಸುಲಿನ್ ಕಡ್ಡಾಯವಾಗಿ ತೆಗೆದು ಕೊಳ್ಳಬೇಕಾಗುತ್ತದೆ, ಟೈಪ್ 2 ಮೂವತ್ತೈದು ವರ್ಷ ಮೇಲ್ಪಟ್ಟವರಿಗೆ ಕಂಡುಬರುತ್ತದೆ ಇತ್ತಿಚೀನ ದಿನಗಳಲ್ಲಿ ಆರೋಗ್ಯಕರ ಜೀವನ ಶೈಲಿ ಇಲ್ಲದ ಕಾರಣ ಮತ್ತು ಅತೀ ಅಹಾರ ಸೇವನೆ, ಕರಿದ ಪದಾರ್ಥಗಳ ಸೇವನೆ, ಕ್ರಿಯಾತ್ಮಕ ಚಟುವಟಿಕೆ ಇರದೇ ಒಂದೇ ಕಡೆ ಕುಳಿತು ಕೊಳ್ಳುವುದು, ಬೊಜ್ಜು, ಟಿವಿ ನೋಡುತಾ ಊಟ ಮಾಡುವುದು ಇಂತಹ ಅನೇಕ ಕಾರಣಗಳಿಂದ ಮಧುಮೇಹ ಉಂಟಾಗುತ್ತದೆ, ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕು, ಹಿಂದೆ 60-70 ವರ್ಷ ವಯಸ್ಸಿನವರಿಗೆ ಕಂಡು ಬರುತ್ತಿದ್ದ ಮಧುಮೇಹ 35 ರ ಅಸುಪಾಸಿಗೆ ಬಂದು ನಿಂತಿದೆ,
ಮಧುಮೇಹ ಇದೆ ತಿಳಿದ ನಂತರ ನಿರಂತರ ಚಿಕಿತ್ಸೆ ಚಿಕಿತ್ಸೆ ಪಡೆಯಬೇಕು, ಕೆಲವು ದಿನ ಚಿಕಿತ್ಸೆ ಪಡೆದು ಕೊಂಡ ನಂತರ ಸಕ್ಕರೆ ಅಂಶ ನಾರ್ಮಲ್ ಇದೆ ಎಂದು ಚಿಕಿತ್ಸೆ ನಿಲ್ಲಿಸಬಾರದು ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಏರುಪೇರಾಗಿ ಇತರೆ ಅಂಗಾಂಗಳಿಗೆ ತೊಂದರೆ ಉಂಟಾಗುತ್ತದೆ ಮಾತ್ರೆಗಳು ಮತ್ತು ಇನ್ಸುಲಿನ್ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ, ಮತ್ತು ಈ ಎಲ್ಲಾ ಮಾಹಿತಿಯನ್ನು ಜನರಿಗೆ ತಲುಪಿಸುವ ಸಲುವಾಗಿ ಪ್ರತಿವರ್ಷ ನವಂಬರ್ 14 ರಂದು ಜಾಗೃತಿ ಮೂಡಿಸಲಾಗುತ್ತದೆ ಮತ್ತು ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು, ನಿತ್ಯ ವ್ಯಾಯಾಮ, ಬಿರುಸಿನ ನಡಿಗೆ, ಯುವಕರು ಸೈಕಲ್ ತುಳಿತ, ಕ್ರಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ಸಲಹೆ ನೀಡಿದರು,
ಈ ಸಂದರ್ಭದಲ್ಲಿ ಡಾ. ಅಪ್ರೋಜ್ ಬಾನು, ಡಾ. ಲಕ್ಷ್ಮಿ ,ಎನ್ ಸಿ ಡಿ ಕೌನ್ಸಿಲರ್ ಬಶೀರ್ ಸಾಬ್, ಎನ್ ಸಿ ಡಿ ಸ್ಟಾಫ್ ನರ್ಸ್ ಮಮತಾ, ಎನ್ ಸಿ ಡಿ ಲ್ಯಾಬ್ ಟೆಕ್ನಿಷಿಯನ್ ಮಂಜುನಾಥ್, ಎನ್ ಸಿ ಡಿ.ಡಿಇಓ ಮಹಾಂತ, ಹೆಲ್ತ್ ಇನ್ಸ್ಪೆಕ್ಟರ್ ಗೀತಾ ಕುಮಾರಿ,ಮಲ್ಲೇಶಪ್ಪ, ಶಿವರಂಜನಿ, ಹಾಗೂ ಪರಿಸರ ಅಭಿಯಂತರಾದ ಅನ್ನಪೂರ್ಣಮ್ಮ ಇತರರು ಉಪಸ್ಥಿತರಿದ್ದರು