ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು, ಸಾಸಲವಾಡ ಗ್ರಾಮದಲ್ಲಿ ಸಿಐಟಿಯು ಸಿಡಬ್ಲೂಎಫ್ಐ ಗ್ರಾಮ ಘಟಕ ಅಸ್ಥಿತ್ವಕ್ಕೆ ತರಲಾಯಿತು. ವಕೀಲರು ಹಾಗೂ ಹೋರಾಟಗಾರರಾದ ಸಿ.ವಿರುಪಾಕ್ಷಪ್ಪ ನಾಮ ಫಲಕ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರು ಸಂಘಟಿತರಾಗಬೇಕು ಹಾಗೂ ಎಂಥಹ ಸಂಸರ್ಭದಲ್ಲಿಯೂ ಒಗ್ಗಟ್ಟು ಕಾಪಾಡಬೇಕೆಂದರು, ಪ್ರತಿ ಕಾರ್ಮಿಕ ಸಂಘಟನೆಯ ಸದಸ್ಯತ್ವ ಹೊಂದಬೇಕು ಮತ್ತು ಕಾರ್ಮಿಕ ಮಂಡಳಿಯ ಸೌಕರ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದರು. ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ ಮಾತನಾಡಿದರು ಇದೇ ಸಂದರ್ಭದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗ್ರಾಮ ಘಟಕದ ಪಾಧಿಕಾರಿಗಳು ಗ್ರಾಮದ ಹಿರಿಯರು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ವರದಿ:-ಮಂಜುನಾಥ್. ಹೆಚ್