ವಿಜಯನಗರ: ಕೂಡ್ಲಿಗಿ ಪಟ್ಟಣದಲ ನ್ಯಾಯಾಲಯದ ಆವರಣದಲ್ಲಿಂದು ರಾಷ್ಟ್ರೀಯ ಜನತಾ ನ್ಯಾಯಾಲಯ ಪ್ರಚಾರ ಆಂದೋಲನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.ಜಾಥವನ್ನು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಕೆ.ಎ.ನಾಗೇಶರವರು ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಲಯ ಇಲಾಖೆ ಸಾರ್ವಜನಿಕರಿಗೆ ಹಾಗೂ ಕಕ್ಷಿದಾರರಿಗೆ ಉಚಿತವಾಗಿ, ಸ್ಥಳದಳಲ್ಲಿಯೇ ಪರಸ್ಪರ ಒಪ್ಪಿಗೆಯ ಮೇರೆ ಸಮಕ್ಷಮ ವಕೀಲರ ಉಪಸ್ಥಿತಿಯಲ್ಲಿ. ಎರಡೂ ಕಡೆಯವರು ಒಪ್ಪಿ ರಾಜೀ ಸಂದಾನದ ಮಾಡಿಕೊಳ್ಳೋ ಮೂಲಕ, ಜನತಾ ನ್ಯಾಯಾಲಯದಲ್ಲಿ ನ್ಯಾಯ ನಿರ್ಣಯ ಪಡೆಯುವ ಸೂಕ್ತ ವೇದಿಕೆಯಾಗಿದೆ. ಕಾರಣ ಕಕ್ಷಿದಾರರು ಹಾಗೂ ಸಾರ್ವಜನಿಕರು ತಮ್ಮ ತಮ್ಮ ವಕೀಲರ ಸಹಯೋಗದೊಂದಿಗೆ,ಜನತಾ ನ್ಯಾಯಾಲಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಕೋರಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ, ಸರ್ಕಾರಿ ಸಹಾಯಕ ಅಭಿಯೋಜಕರಾದ ಹೊಸವಡ್ರು ಅಣ್ಣೆಶ್, ನ್ಯಾಯಾಲಯ ಸಿಬ್ಬಂದಿ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು. ಕಕ್ಷಿದಾರರು ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು.