15ದಿನಗಳಲ್ಲಿ 24×7ಕುಡಿಯವ ನೀರಿನ ಕಾಮಗಾರಿ ವಿಳಂಬ ವಾರದಲ್ಲಿ ಮೂಕದ್ದುಮೆ ಹುಡುವುದಾಗಿ ಖಡಕ್ಕಾಗಿ ಎಚ್ಚರಿಕೆ ನೀಡಿದ ಶಾಸಕ ಬೀಮನಾಯ್ಕ್.
ಕೊಟ್ಟೂರು ಪಟ್ಟಣದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಅಭಿವೃದ್ಧಿ ಪಡಿಸಲು ಮುಂದಾಗುವೆ ಎಂದು ಶಾಸಕ ಬೀಮನಾಯ್ಕ್ ಹೇಳಿದರು.ಶುಕ್ರವಾರ ನೂತನ ಕಟ್ಟಡ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ನಂತರ ಸುದ್ದಿ ಗಾರರೊಂದಿಗೆ ಅವರು ಮಾತನಾಡಿದರು.
ಜೂಲೈ ಹತ್ತುರಿಂದ ನಾಲ್ಕು ದಿನಕ್ಕೆ ಒಮ್ಮೆ ನೀರು ಪೂರೈಕೆ ಮಾಡುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಭಾರತಿ ಸುಧಾಕರ ಪಾಟೀಲ್ ಹಾಗೂ ಉಪಾಧ್ಯಕ್ಷ ಕೆ ಶಫೀ , ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಾಣ್ಣ ಸೇರಿದಂತೆ 13ಸದಸ್ಯರು ವತ್ತಾಹಿಸಿದ್ದಾರೆ .
ಅಧೀಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ನಾಲ್ಕು ದಿನಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದುರು.
ಅಧೀಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ 24X7 ಪದೆ ಪದೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ 15ದಿನದಳೊಗೆ ಕಾಮಗಾರಿ ಮುಗಿಯಬೇಕು.ಇಲ್ಲಾವಾದಲ್ಲಿ ಗುತ್ತಿಗಿದಾರರ ವಿರುದ್ಧ ದೂರು ದಾಖಲು ಮಾಡಲಾಗುವುದು ಎಂದರು.
ಪಟ್ಟಣದಲ್ಲಿನ ರೇಣುಕಾ ರಸ್ತೆಯ ಕಾಮಗಾರಿ ವಿಳಂಬವಾಗುತ್ತಿದೆ . ವಿದ್ಯುತ್ ಕಂಬಗಳು ಬದಲಾವಣೆ ಸಮಸ್ಯೆ ಇತ್ತು. ಅಧೀಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕಾಮಗಾರಿ ಮುಂದಾಗಿದೆ ಎಂದರು.
ಜಯಪ್ರಕಾಶ್ ನಾರಾಯಣ್ ನಗರ ಹಾಗೂ ರಾಜೇವ್ ನಗರ ಎರಡು ಪ್ರದೇಶಗಳನ್ನು ಕೊಳಚೆ ಪ್ರದೇಶಗಳು ಎಂದು ಸಾಮಾನ್ಯ
ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು. ಪಟ್ಟಣದಲ್ಲಿ ಸ್ವಚ್ಛತೆ ಹಾಗೂ ಬೀದಿ ದೀಪ ಎಲ್ ಇಡಿ ದೀಪಗಳನ್ನು ನೀಡಲಾಗುವುದು. ಅಕಾಲಿಕವಾಗಿ ಗುರುವಾರ ಸಂಜೆ ವಾಣಿ ಪತ್ರೀಕೆಯ ವರದಿಗಾರ ಉತ್ತಂಗಿ ಹೆಮಣ್ಣ ಅವರ ನಿದನಕ್ಕೆ ಸಂತಾಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ ನಸುರುಲ್ಲಾ, ತಾ.ಪಂ.ಇ ಒ ಬೆಣ್ಣೆ ವಿಜಯಕುಮಾರ್, ಮಾಜಿ ಜಿ.ಪಂ ಸದಸ್ಯ ಹರ್ಷವರ್ಧನ್ ,ಎ ಪಿಎಂ ಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ದೂಪದಹಳ್ಳಿ ಮಲ್ಲಿಕಾರ್ಜುನ, ಮತ್ತಿತರರು ಇದ್ದರು.
ವರದಿ: ಶಿವರಾಜ್ ಕನ್ನಡಿಗ