ಗಣಿನಾಡು ಬಳ್ಳಾರಿ ಜಿಲ್ಲೆಯ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ಜಿಲ್ಲಾ ಉಪಾಧ್ಯಕ್ಷರಾಗಿ ಸಂಡೂರುನ ಹೆಚ್.ಜಿ.ಎರ್ರಿಸ್ವಾಮಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ. ರವಿಕೃಷ್ಣಾ ರೆಡ್ಡಿ ಅವರ ಅನುಮತಿ ಮೇರೆಗೆ ಜಿಲ್ಲಾಧ್ಯಕ್ಷರಾದ ಕೆ. ಶ್ರೀನಿವಾಸ ರೆಡ್ಡಿ ಅವರು 23.07.2021 ರಂದು ನೇಮಕಮಾಡಿ ಆದೇಶ ನೀಡಿದ್ದಾರೆ
ಹೆಚ್.ಜಿ.ಎರ್ರಿಸ್ವಾಮಿ ಇದಕ್ಕೂ ಮೊದಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಂಡೂರು ತಾಲೂಕು ಅಧ್ಯಕ್ಷರಾಗಿಯು ಸಹ ಕಾರ್ಯ ನಿರ್ವಹಿಸಿದ್ದಾರೆ
ಪಕ್ಷದ ತತ್ವ ಸಿದ್ದಾಂತ ಹಾಗೂ ನೀತಿ-ನಿಯಮಗಳಿಗೆ ಅನುಗುಣವಾಗಿ ಪಕ್ಷವನ್ನು ಸಂಘಟಿಸಿ ಮುನ್ನಡೆಸಬೇಕು ಮತ್ತು ಜನಪರ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷವನ್ನು ಸದೃಢಗೊಳಿಸಬೇಕು ಎಂದು ಅದೇಶಪತ್ರದಲ್ಲಿ ಆದೇಶಿಸಲಾಗಿದೆ