ರಾಜಾರೋಷವಾಗಿ ಮಧ್ಯೆ ಮಾರಾಟ ಕಡಿವಾಣ ಯಾವಾಗ..? ಗ್ರಾಮಸ್ಥರು ಹಿಡಿಶಾಪ..!!

0
400

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಹ್ಯಾಳ್ಯ ಗ್ರಾಮದಲ್ಲಿ ಮಧ್ಯೆ ಮಾರಾಟ ಮಾಡುವವರಿಗೆ ಕಡಿವಾಣ ಯಾವಾಗ ಎಂದು ಅಧಿಕಾರಿಗಳನ್ನು ಕೇಳುತ್ತಿದ್ದಾರೆ.ಗ್ರಾಮಸ್ಥರು

ಪ್ರಮುಖ ಮುಖಂಡರು ಮಹಿಳೆಯರು ದೂರವಾಣಿ ಮುಖಾಂತರ ತಿಳಿಸಿದರು ಅವರ ಹೇಳಿಕೆಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೋಲೀಸ್ ಇಲಾಖೆ ಅಧಿಕಾರಿಗಳು ಮೂರು ನಾಲ್ಕು ದಿನ ಹಿಂದೆ ಮಧ್ಯೆ ಮಾರಾಟ ಮಾಡುವವರನ್ನು ನೆಪಕ್ಕೆ ಮಾತ್ರ ಒಬ್ಬರನ್ನು ಜೈಲಿಗೆಟ್ಟಿದ್ದರು.

ಈಗ ಮತ್ತೆ ಹ್ಯಾಳ್ಯ ಗ್ರಾಮದಲ್ಲಿ ನಾಲ್ಕು ಜನ ಮಧ್ಯೆ ಮಾರಾಟ ಮಾಡುವವರು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ ಗ್ರಾಮದ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ.

ಪ್ರಜ್ಞಾವಂತರು ಮುಂದಿನ ದಿನಗಳಲ್ಲಿ ಈ ಮಧ್ಯೆ ಮಾರಾಟವನ್ನು ನಿಲ್ಲಿಸಿದೆದ್ದಲ್ಲಿ ಅಧಿಕಾರಿಗಳ ವಿರುದ್ಧ ರೋಡ್ ಗೆ ಇಳಿದು ಪ್ರತಿಭಟನೆ ಮಾಡಲಾಗುತ್ತದೆ. ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು

ನಮ್ಮ ಹಳ್ಳಿಯಲ್ಲಿ ಮದ್ಯ ಮಾರಾಟ ಹೆಚ್ಚಾಗಿದ್ದು ಯುವಕರು ವಿದ್ಯಾರ್ಥಿಗಳು ಹಾಳಾಗುವ ಸ್ಥಿತಿಗೆ ಬಂದು ಒದಗಿದೆ. ಹಳ್ಳಿಯಲ್ಲಿ ಕುಡಿತದಿಂದ ಬಹಳ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ಇದೆ ಮಹಿಳೆಯರು ಆಕ್ರೋಶಗೊಂಡಿದ್ದಾರೆ. –

-ಬಡಿಗೇರ್ ಕೊಟ್ರೇಶ್.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here