ಮೈದುಂಬಿ ಹರಿದ ಅಲಬೂರಿನ ಹಗರಿಹಳ್ಳ, ಸಂಭ್ರಮದಿ ಬಾಗೀನ ಸಮರ್ಪಣೆ

0
308

ಕೊಟ್ಟೂರು: ತಾಲೂಕಿನ ಸುರಿದ ಮಳೆಗೆ ಅಲಬೂರು ಗ್ರಾಮದ ಹಗರಿಹಳ್ಳ ಮೈದುಂಬಿ ಸೇತುವೆಯ ಮೇಲೆ ಹರಿದಿದೆ. ಸುಮಾರು ವರ್ಷಗಳ ನಂತರ ಹಗರಿಹಳ್ಳ ತುಂಬಿ ಹರಿದಿದ್ದು ಗ್ರಾಮಸ್ತರ ಮನದಲ್ಲಿ ಹರ್ಷ ತುಂಬಿ ತುಳುಕಿತು. ಹಗರಿಹಳ್ಳ ಈರೀತಿಯಾಗಿ ಹರಿಯುವುದರಿಂದ ಮಾಲವಿ ಜಲಾಶಯ ನೀರು ಸಂಗ್ರಹಣೆ ಹೆಚ್ಚಾಗಲಿದ್ದು ಗ್ರಾಮಸ್ತರು ಹಗರಿಹಳ್ಳದ ಗಂಗಾಮಾತೆಗೆ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ತಹಶೀಲ್ದಾರರಾದ ಕುಮಾರಸ್ವಾಮಿ ಎಂ. ಇವರಿಂದ ಬಾಗೀನ ಸಮರ್ಪಣೆ ಮಾಡಿ ಸಂತಸಗೊಂಡರು. ಈ ಸಮಯದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ವಿವಿದ ಸಮಾಜದ ಮುಖಂಡರು, ಕಂದಾಯ ನಿರೀಕ್ಷಕರಾದ ಡಿ.ಶಿವಕುಮಾರ್, ಹಾಲಸ್ವಾಮಿ, ಗ್ರಾಮ ಲೆಕ್ಕಿಗರಾದ ಸುಧಾ ಜೈನರ್, ತೋಟಗಾರಿಕೆ ಅಧಿಕಾರಿ ನಾಗರಾಜ ಹಾಗು ಇತರರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here