ರಾಯಚೂರು:ನ: 08:- ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಮಿಲಾಪ್ ಶಾದಿ ಮಹಲ್ ನಲ್ಲಿ ದಿನಾಂಕ 05.11.2022 ರಂದು ಕರಾಟೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು
ಮಾಸ್ಟರ್ ಕರಾಟೆ ಅಸೋಸಿಯೇಷನ್ ಇಂಡಿಯಾ ಸಂಸ್ಥೆಯು ಆಯೋಜಿಸಿದ್ದ 6ನೇ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ, ಸಂಡೂರು ತಾಲೂಕು ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಕತಾ ವಿಭಾಗದಲ್ಲಿ 7-ಪ್ರಥಮ,5-ದ್ವಿತೀಯ ಹಾಗೂ 5- ತೃತೀಯ ಟ್ರೋಫಿ ಗಳು ಹಾಗೂ ಫೈಟಿಂಗ್ ವಿಭಾಗದಲ್ಲಿ 4-ಪ್ರಥಮ ಹಾಗೂ 6-ತೃತೀಯ ಟ್ರೋಫಿಗಳನ್ನು ಗೆಲ್ಲುವ ಮೂಲಕ ಒಂದು ಉತ್ತಮ ಸಾಧನೆಯನ್ನು ಮಾಡಿ ಸಂಡೂರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ಮುಖ್ಯ ತರಬೇತಿದಾರರಾದ ಸೆನ್ಸ್ಯಿ ಶಿವಕುಮಾರ್ ಹಾಗೂ ಸಹ ತರಬೇತಿದಾರರಾದ ಸೆನ್ಸ್ಯಿ ರಮೇಶ್ ಹಾಗೂ ಸೆನ್ಸ್ಯಿ ರಾಜೇಶ್ ಉಪಸ್ಥಿತರಿದ್ದರು.