ಸಂಡೂರು ತಾಲೂಕಿನ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಿ.ಮಲ್ಲಾಪುರ ಗ್ರಾಮದಲ್ಲಿ ಜಿಲ್ಲಾ ಹೆಚ್.ಐ.ವಿ ಏಡ್ಸ್ ನಿಯಂತ್ರಣ ಘಟಕ,ಬಳ್ಳಾರಿ, ಐ.ಸಿ.ಟಿ.ಸಿ ಕೇಂದ್ರ ಸಂಡೂರು ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ಮತ್ತು ಎನ್.ಸಿ.ಡಿ ಕ್ಲಿನಿಕ್ ಹಾಗೂ ದಂತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು, ಈ ಶಿಬಿರದಲ್ಲಿ 410 ಜನರು ತಪಾಸಣೆಗೆ ಒಳಗಾಗಿದ್ದರು, 40 ಯುವಕರು ರಕ್ತದಾನ ಮಾಡಿದರು,
ಈ ಸಂದರ್ಭದಲ್ಲಿ ಕಾಳೀಂಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸೀತಮ್ಮ, ಬಂಡ್ರಿ ವೈದ್ಯಾಧಿಕಾರಿ ಡಾ.ಚಂದ್ರಪ್ಪ, ದಂತ ಆರೋಗ್ಯಾಧಿಕಾರಿ ಡಾ.ಅಫ್ರಾಜ್, ವಿಮ್ಸ್ ರಕ್ತಭಂಡಾರದ ಸಿಬ್ಬಂದಿ ತಿಪ್ಪೇಸ್ವಾಮಿ, ಸಿ.ಹೆಚ್.ಓ ಹನುಮಂತಪ್ಪ, ಐ.ಸಿ.ಟಿ.ಸಿ ಕೌನ್ಸಿಲರ್ ಮರೇಗೌಡ, ವಿಮುಕ್ತಿ ಮೇಲ್ವಿಚಾರಕಿ ದುರುಗಮ್ಮ, ಕೆ.ಹೆಚ್.ಪಿ.ಟಿ, ಉದ್ಭವ್ ಎಮ್.ಎಮ್.ಯು ಮತ್ತು ಅರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು