ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಜಾಗೃತಿ ಕಾರ್ಯಕ್ರಮ,

0
495

ಸಂಡೂರು:ಜುಲೈ:30:-ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ಮಾಡುವುದು ದೇಶದ ಘನತೆಗೆ ಧಕ್ಕೆ ತರುವ ಕೃತ್ಯ, ಕಳ್ಳ ಸಾಗಾಣಿಕೆಗೆ ಬಲಿಯಾಗುವ ಬಹುತೇಕರು ಮಹಿಳೆಯರು ಮತ್ತು ಮಕ್ಕಳು ಇರುತ್ತಾರೆನ್ನಬಹುದು, ಸಾಗಾಣಿಕೆಗೆ ಬಲಿಯಾದವರೆಲ್ಲಾ ಲೈಂಗಿಕ ದೌರ್ಜನ್ಯ ಕೃತ್ಯಕ್ಕೆ ಬಳಸಿಕೊಳ್ಳುವ, ಅಥವಾ ಜೀತ ಪದ್ಧತಿ ಒಳಪಡಿಸುವುದು, ಅಥವಾ ಮಕ್ಕಳಿಂದ ಭಿಕ್ಷಾಟನೆ ಮಾಡಿಸುವುದು, ಬಾಲ ಕಾರ್ಮಿಕ ಪದ್ದತಿಗೆ ನೂಕುವುದು, ಇಂತಹ ಎಲ್ಲ ಕೃತ್ಯಗಳು ಮನು ಕುಲಕ್ಕೆ ಅಗೌರವ ತರುವ ವಿಷಯ, ಪ್ರತಿಯೊಬ್ಬ ಮಾನವರಿಗೆ ಸ್ವತಂತ್ರವಾಗಿ ಗೌರವದಿಂದ ಬದುಕುವ ಹಕ್ಕಿದೆ, ಸರ್ಕಾರ ಮಾನವ ಕಳ್ಳ ಸಾಗಾಣಿಕೆ ಮಾಡುವವರಿಗೆ ಕಠಿಣವಾದ ಶಿಕ್ಷೆ ಇದ್ದರೂ ಇಂತಹ ಕೃತ್ಯಗಳು ಬೆಳಕಿಗೆ ಬಂದಾಗ, ಸಾಗಾಣಿಕೆಯನ್ನು ತಡೆಗಟ್ಟಿ ಬಲಿಯಾದವರಿಗೆ ಸಹಜವಾಗಿ ಬದುಕುವ ಪುನರ್ ವಸತಿ ಕಲ್ಪಿಸುವ ಕ್ರಮ ಕೈಗೊಳ್ಳುತ್ತಿದೆ, ವಿಶ್ವ ಆರೋಗ್ಯ ಸಂಸ್ಥೆಯು ಇದೆಲ್ಲವನ್ನೂ ಮನಗೊಂಡು ಜುಲೈ 30 ನ್ನು “ಮಾನವ ಕಳ್ಳ ಸಾಗಾಣಿಕೆ ತಡೆ ದಿನ”ವನ್ನಾಗಿ ಆಚರಿಸಿ ಜನರಿಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ, ಸಾಗಾಣಿಕೆ ಕೃತ್ಯಗಳು ಎಲ್ಲಿಯಾದರೂ ಕಂಡುಬಂದಾಗ ಉಚಿತ ಸಹಾಯವಾಣಿ 1098 ಅಥವಾ18883737888 ಸಂಖ್ಯೆಗೆ ಕರೆ ಮಾಡಿ ಎಲ್ಲಾ ವಿವರಗಳ ಮಾಹಿತಿ ನೀಡಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಮತ್ತು ಸಂವಿಧಾನಲ್ಲಿ ನೀಡಿರುವ ಸಮಾನತೆಯನ್ನು ಸಾಧಿಸಲು ಜನರ ಸಹಕಾರ ಬೇಕಿದೆ, ಹಾಗೂ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯಲು ಸರ್ಕಾರೇತರ ಸಂಸ್ಥೆಗಳ ಪಾತ್ರವೂ ದೊಡ್ಡದಿದೆ, ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕಿದೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ತೋರಣಗಲ್ಲು ಪಿ.ಎಸ್.ಐ ತನಿಖಾದಳ, ಎಸ್.ಎಸ್ ವಡ್ಡರ್ ಅವರು ಮಾತನಾಡಿ ಕಳ್ಳ ಸಾಗಣೆ ನಡೆಯುವ ಮುನ್ನ ಅಪರಿಚಿತ ವ್ಯಕ್ತಿಗಳ ಚಟುವಟಿಕೆಗಳ ಬಗ್ಗೆ ಅನುಮಾನಾಸ್ಪದವಾಗಿ ಕಂಡು ಬಂದಲ್ಲಿ ಅರಕ್ಷಕ ಸಿಬ್ಬಂದಿಯವರಿಗೆ ಸೂಕ್ಷ್ಮವಾಗಿ ತಿಳಿಸಿ, ಅಥವಾ100 ಕರೆ ಮಾಡಿ, ತಕ್ಷಣ ಇಲಾಖೆ ಕಾರ್ಯ ಪ್ರವೃತ್ತವಾಗುತ್ತದೆ, ತಿಳಿಸಿದವರ ಹೆಸರು ಬಹಿರಂಗ ಪಡಿಸದೆ ಗೌಪ್ಯತೆ ಕಾಪಾಡಲಾಗುತ್ತದೆ, ಜನರ ಸಹಕಾರ ಅತೀ ಮುಖ್ಯ ಎಂದು ತಿಳಿಸಿದರು,

ಕಾರ್ಯಕ್ರಮದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುವ ಪ್ರತಿಜ್ಞೆಯನ್ನು ಶಿವಪ್ಪ ಅವರು ಬೋಧಿಸಿದರು, ಎಲ್ಲರೂ ಪ್ರತಿಜ್ಞೆಯನ್ನು ಕೈಗೊಂಡರು,

ಈ ಸಂದರ್ಭದಲ್ಲಿ ತೋರಣಗಲ್ಲು ಅರಕ್ಷಕ ಠಾಣೆ ಪಿ.ಎಸ್.ಐ ಎಸ್.ಎಸ್ ವಡ್ಡರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಸ್ಪತ್ರೆ ಸಿಬ್ಬಂದಿ ಶಶಿಧರ್, ರಾಮುಲು, ಗೀತಾ, ರೂಪಾ, ಶಿವಕುಮಾರ್, ಸುನಿಲ್, ಸಿದ್ದೇಶ್,ಸುಧಾ, ರೋಜಾ, ನಿಜಾಮುದ್ದೀನ್, ಶಿವರಾಜ, ನವೀನ್, ಮತ್ತು ಗ್ರಾಮದ ನಾಗರೀಕರಾದ ಶಿವರಾಜ್, ಪ್ರಕಾಶ್, ಮಲ್ಲಿಕಾರ್ಜುನ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here