ಕೊಟ್ಟೂರು: ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ಹಗರಿಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರವು ಎಸ್ ಸಿ ಮೀಸಲಾತಿ ಕ್ಷೇತ್ರವಾಗಿರುವ 2023 ನೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಾಗಿರುವ ಎಸ್. ಭೀಮನಾಯ್ಕ ಸೋಲುವುದು ಕಟ್ಟಿಟ್ಟ ಬುತ್ತಿ ಎಂದು ಬಿಜೆಪಿ ಮಾಜಿ ಶಾಸಕರಾದ ಕೆ ನೇಮಿರಾಜ್ ನಾಯ್ಕ ಹೇಳಿದರು.
ಪಟ್ಟಣದ ಶನಿವಾರದಂದು ಬೆಳಗ್ಗೆ 11:30ಕ್ಕೆ ಶ್ರೀ ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಗರಿಬೊಮ್ಮನಹಳ್ಳಿ ಬಿಜೆಪಿ ಮಂಡಲ ಸಮಿತಿ ಆಯೋಜಿಸಿರುವ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಕೆ. ನೇಮರಾಜ್ ನಾಯ್ಕ್ ರವರು ರಾಜ್ಯ ಮತ್ತು ಕೇಂದ್ರದಲ್ಲಿರುವ ನಮ್ಮ ಡಬಲ್ ಇಂಜಿನ್ ಸರ್ಕಾರವು ಪ್ರತಿ ಒಂದು ಕ್ಷೇತ್ರದಲ್ಲೂ ಅಭಿವೃದ್ಧಿ ಕಾಣುವಂತ ಹಲವು ಜನಪ್ರಿಯ ಯೋಜನೆಗಳು ಜಾರಿಗೆ ತಂದಿದೆ. ಸಮಾಜದ ದುರ್ಬಲ ವರ್ಗದ ಜನರಿಗೆ ಅನೇಕ ಅಭಿವೃದ್ಧಿ ಯೋಜನೆಗಳು ಜಾರಿಗೆ ತಂದಿದೆ. ಎಂದು ಮಾಜಿ ಶಾಸಕ ಕೆ.ನೇಮಿರಾಜ್ ನಾಯ್ಕ್ ವಾಗ್ದಾಳಿ ನಡೆಸಿದರು.
ನಂತರ ಮಾತನಾಡಿದ ಬಿಜೆಪಿ ಜಿಲ್ಲಾ ಸಂಚಾಲಕ ಕೆ. ಎಂ ತಿಪ್ಪೇಸ್ವಾಮಿ ಮಾತನಾಡಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದು ನಮ್ಮ ಸರ್ಕಾರವಾಗಿದ್ದು ಇಂತಹ ಅನೇಕ ಜನಮುಖಿ ಯೋಜನಗಳನ್ನು ಜಾರಿಗೊಳಿಸಿ ಜನಪ್ರಿಯತೆ ಪಡೆದುಕೊಂಡಿದೆ. ಸಿದ್ದಲಿಂಗನಗೌಡ ಕೊಗಳಿ, ಬಿ.ಆರ್ ವಿಕ್ರಂ ಮಾತನಾಡಿ ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಭಾರತೀಯ ಜನತಾ ಪಾರ್ಟಿ ಪಕ್ಷವು ಬಹುಮತದೊಂದಿಗೆ ಪಡೆದು ನಮ್ಮ ಸರ್ಕಾರ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷರಾದ ವೀರೇಶ್ ಸ್ವಾಮಿ, ಬಲ್ಲಹುಣಸಿ ರಾಮಣ್ಣ, ಕೃಷ್ಣ ನಾಯಕ್, ಜಯಪ್ರಕಾಶ್, ಮಲ್ಲಿಕಾರ್ಜುನ್ ನಾಯಕ್, ಪಿ. ಹೆಚ್ ಕೊಟ್ರೇಶ್, ಬಾಗಳಿ ಪ್ರೇಮಕ್ಕ, ಜಗದೀಶ್, ಗಡ್ಡಿ ಬಸಪ್ಪ, ಚಿರಬಿ ನಾಗರಾಜ್, ಹಾಗೂ ಈ ಕಾರ್ಯಕ್ರಮದ ಸ್ವಾಗತ ಕಾರ್ಯಕ್ರಮವನ್ನು ವಕೀಲ ಪ್ರಕಾಶ್ ದೊಡ್ಮನಿ ಸ್ವಾಗತಿಸಿ ನಿರೂಪಣೆ ಮಾಡಿದರು.
ವರದಿ: ಶಿವರಾಜ್ ಕನ್ನಡಿಗ