ಸಿರುಗುಪ್ಪದಲ್ಲಿ ಅಚ್ಚೇದಿನ್ ಆಯಾಗ ಬರಬೇಕು ಅಂದ್ರೆ ಕೆ ಆರ್ ಪಿ ಪಿ ಪಕ್ಷಕ್ಕೆ ಬೆಂಬಲ ನೀಡಿ : ಧರಪ್ಪ ನಾಯಕ.!

0
181

ಕುರುಗೋಡು. ಫೆ.28: ಮೋದಿ ಸರ್ಕಾರ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ವಧುವರರು ಕೂಡ ಇಂದು ತಾಳಿ ಕಟ್ಟುವ ಬದಲು ಅರಿಸಿನ ಕೊಂಬಿನ ದಾರ ಕಟ್ಟುವ ಪರಿಸ್ಥಿತಿಗೆ ತಂದೂಡ್ಡಿದೆ ಎಂದು ಕೆಆರ್ ಪಿಪಿ ಪಕ್ಷದ ಅಭ್ಯರ್ಥಿ ಧರಪ್ಪ ನಾಯಕ ಹೇಳಿದರು.

ಸಮೀಪದ ಮಣ್ಣೂರು ಗ್ರಾಮಕ್ಕೆ ಭೇಟಿ ಕೊಟ್ಟು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು. ಇವತ್ತಿನ ದಿನಗಳಲ್ಲಿ ಗ್ಯಾಸ್, ಹೆಣ್ಣೆ, ಬಸ್, ಅಕ್ಕಿ, ಬೆಳೆ ಸೇರಿದಂತೆ ಇತರೆ ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿ ಸಾರ್ವಜನಿಕರ ಬದುಕು ಅತಂತ್ರವಾಗಿ ಬಿಟ್ಟಿದೆ. ಡಬಲ್ ಇಂಜಿನ್ ಸರ್ಕಾರ ಅಂತ ಹೇಳುತ್ತಿದ್ದಾರೆ ಆದ್ರೆ ಜನಪರ ಕೆಲಸ ಮಾಡುತ್ತಿಲ್ಲ ಬದಲಾಗಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಎಲ್ಲಿ ನೋಡಿದರು 40% ಕಮಿಷನ್ ಗುತ್ತಿಗೆದಾರರ ಅತ್ತಿರ ಹೋಗಿ ಕೇಳಿ ಶಾಸಕರ ಮತ್ತು ಸರ್ಕಾರದ ಬಗ್ಗೆ ನಿಮಗೆ ಸಂಪೂರ್ಣ ಗೊತ್ತಾಗುತ್ತದೆ ಎಂದರು.

ಸಿಪಿಐ, ಪಿಎಸ್ ಐ, ಕೃಷಿ ಅಧಿಕಾರಿ ಸೇರಿದಂತೆ ಅನೇಕ ಅಧಿಕಾರಿಗಳನ್ನು ಹಾಕಿಸಿಕೊ 25 ರಿಂದ 30 ಲಕ್ಷದವರೆಗೆ ಅಧಿಕಾರಿಗಳ ಹತ್ತಿರ ಹಣ ಪಡೆದರೆ ಅಂತಹ ಅಧಿಕಾರಿ ಜನರ ಸೇವೆ ಮಾಡಲು ಹೇಗೆ ಸಾಧ್ಯ ಎಂದು ಸರಕಾರದ ವಿರುದ್ಧ ಆರೋಪ ಮಾಡಿದರು.

2004 ರಲ್ಲಿ ಸಿರುಗುಪ್ಪ ಕ್ಷೇತ್ರ ಜೆಡಿಎಸ್ ಮತ್ತು ಕಾಂಗ್ರೆಸ್ ಭದ್ರ ಕೋಟೆ ಯಾಗಿತ್ತು ಅದನ್ನು ಛಿದ್ರ ಮಾಡಿ ಕಮಲ ಬಾವುಟ ಹರಿಸಿದ್ದೆ ಜನಾರ್ದನ ರೆಡ್ಡಿ ಹೊರೆತು ಸೋಮಲಿಂಗಪ್ಪ ಅಲ್ಲ ಎಂದರು.

20 ವರ್ಷ ಕಳೆದ ನಂತರ ಹೊಸ ಇತಿಹಾಸ ಮರುಕಳಿಸುತ್ತಿದ್ದೆ 40% ಕಮಿಷನ್ ಸರಕಾರ ಮತ್ತು ಜೆಡಿಎಸ್ ಹಾಗೂ ಕಾಂಗ್ರೆಸ್ ಭದ್ರ ಕೋಟೆಯನ್ನು ಛಿದ್ರ ಮಾಡಲು ಇವತ್ತು ಜನಾರ್ದನ ರೆಡ್ಡಿ ಕಂಕಣ ಬದ್ಧರಾಗಿದ್ದಾರೆ ಎಂದು ಹೇಳಿದರು.

ಇನ್ನೂ ಕಲ್ಯಾಣ ಕರ್ನಾಟಕದಲ್ಲಿ 6 ಜಿಲ್ಲೆಗಳಲ್ಲಿ ಜನಾರ್ದನ ರೆಡ್ಡಿ ಬಂದಿರುವುದರಿಂದ ಎರಡು ಪಕ್ಷದವರಿಗೆ ನಡುಕು ಸೃಷ್ಟಿಯಾಗಿದೆ ಎಂದರು.

ಬಹಳ ದಿನಗಳಿಂದ ಮೋದಿಯವರು ದೇಶದ ಜನರಿಗೆ ಅಚ್ಚೇದಿನ್ ಆಯಾಗ, ಅಚ್ಚೇದಿನ್ ಆಯಾಗ ಅಂತ ಹೇಳುತ್ತಾ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಮತ್ತೆ ಅಚ್ಚೇದಿನ್ ಆಯಾಗ ಹೇಳುತ್ತಿದ್ದಾರೆ ಅದಕ್ಕಾಗಿ ಸಿರುಗುಪ್ಪ ಕ್ಷೇತ್ರದಲ್ಲಿ ಅಚ್ಚೇದಿನ್ ಬರಬೇಕು ಅಂದ್ರೆ ಕೆಆರ್ ಪಿಪಿ ಪಕ್ಷಕ್ಕೆ ಬೆಂಬಲ ನೀಡಿ ಎಂದು ತಿಳಿಸಿದರು.

ಜನಾರ್ದನ ರೆಡ್ಡಿಯವರು ಶೀಘ್ರದಲ್ಲಿ ರೈತರ ಪರವಾಗಿ ಹೊಸ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಒಂದು ಎಕರೆ, ಎರಡು ಎಕರೆ ಹೊಂದಿರುವ ಎಲ್ಲ ಪ್ರತಿಯೊಬ್ಬ ರೈತನ ಕುಟುಂಬಕ್ಕೆ 15 ಸಾವಿರ ಹಾಕಲಿದ್ದಾರೆ. ಇವತ್ತು ರೈತರಿಗೆ ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ 7 ತಾಸು ಬರುತ್ತಿದೆ ಅದು ಕೂಡ ಸರಿಯಾಗಿ ಕೊಡುತ್ತಿಲ್ಲ, ಭತ್ತ ನಾಟಿ ಮಾಡಬೇಕಾದಾಗ ಮತ್ತು ಕಾಳು ಕಟ್ಟುವ ಸಂದರ್ಭದಲ್ಲಿ ಬಹಳ ಸಮಸ್ಯೆಯಾಗುತ್ತಿದೆ ಆದ್ದರಿಂದ 9 ತಾಸು ವಿದ್ಯುತ್ ನೀಡಲಿದ್ದಾರೆ ಎಂದು ತಿಳಿಸಿದರು.

ಮುಂದಿನ ಚುನಾವಣೆಯಲ್ಲಿ ಕೆಆರ್ ಪಿಪಿ ಪಕ್ಷದಿಂದ 10 ಶಾಸಕರುಗಳು ಗೆದ್ರೆ ಇಡಿ ರಾಜ್ಯವನ್ನು ಹಾಳುತ್ತೇನೆ ಜೊತೆಗೆ ರೈತರ ಸಂಕಷ್ಟಗಳಿಗೆ ಆಸರೆಯಾಗುತ್ತೇನೆ ಎಂದು ತಿಳಿಸಿದ್ದಾರೆ ಅಂದರು.

ಪ್ರಾರಂಭದಲ್ಲಿ ಗ್ರಾಮದ ವಾಲ್ಮೀಕಿ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆ ಆಂಜನೇಯ ದೇವಸ್ಥಾನಕ್ಕೆ ಸಮಾವೇಶಗೊಂಡಿತು.

ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಸಿದ್ದಯ್ಯ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಂಡ್ರಳು ಮಲ್ಲಿಕಾರ್ಜುನ, ಮುಖಂಡ
ಚಿಕ್ಕಬಳ್ಳಾರಿ ನಾಗಪ್ಪ, ಬಾಗೇವಾಡಿ ಗ್ರಾಪಂ ಉಪದ್ಯಕ್ಷ ನಾಗರಾಜ್, ಸತ್ಯನಾರಯಣ, ಪಂಪಾಪತಿ, ಸೇರಿದಂತೆ ಕೆಆರ್ ಪಿಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು, ಅಭಿಮಾನಿಗಳು ಇತರರು ಇದ್ದರು.

LEAVE A REPLY

Please enter your comment!
Please enter your name here