ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ಕಾಯ್ದೆಗಳನ್ನು ವಾಪಾಸು ಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ.

0
130

ಬಳ್ಳಾರಿ:ಸೆ:24:- ಇಂದು ಎಡ ಹಾಗೂ ಪ್ರಜಸತ್ತಾತ್ಮಾಕ ಪಕ್ಷಗಳ ಒಕ್ಕೂಟ ವತಿಯಿಂದ ಸಂಯುಕ್ತ ಕಿಸಾನ್ ಮೋರ್ಚಾ ಇದೆ ಸೆಪ್ಟೆಂಬರ್ 27ರಂದು ಕರೆ ನೀಡಿರುವ ಅಖಿಲ ಭಾರತ ಬಂದ್ ಗೆ ಬೆಂಬಲಿಸಿ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡಲಾಯಿತು.

ಕರ್ನಾಟಕ ಸರಕಾರ ರಾಜ್ಯದಲ್ಲಿ ಲೂಟಿಕೋರ ಕಾರ್ಪೊರೇಟ್ ಕಂಪೆನಿಗಳ ಒತ್ತಡಕ್ಕೆ ಮಣಿದು ಲೂಟಿಯ ಪರವಾದ ಜಾಗತೀಕರಣ ಮತ್ತು ಖಾಸಗೀಕರಣದ ನೀತಿಗಳನ್ನು ಜಾರಿಗೊಳಿಸುತ್ತಿರುವುದನ್ನು ನಾವು ಬಲವಾಗಿ ವಿರೋಧಿಸುತ್ತೇವೆ.

ಕರ್ನಾಟಕ ಸರ್ಕಾರ ಕಳೆದ ವರ್ಷ ರಾಜ್ಯದ ಜನತೆ ಕೋವಿಡ್ ಸಂಕಷ್ಟದಲ್ಲಿರುವಾಗ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತುಗಳಲ್ಲಿ ನಿಯಮಾವಳಿಯಂತೆ ವಿಶೇಷ ಚರ್ಚೆಗೆ ಒಳಪಡಿಸದೇ ಅದೇ ರೀತಿ, ಅಂತಹ ಕಾಯ್ದೆಗಳಿಂದ ಭಾದಿತರಾಗುವ ಜನ ಸಮುದಾಯಗಳು ಮತ್ತು ತಜ್ನರುಗಳು, ಸಂಘ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಜೊತೆ ವ್ಯಾಪಕ ಚರ್ಚೆಗೊಳಪಡಿಸದೇ ಸಂಚಿನಂತೆ ತರಾತುರಿಯಲ್ಲಿ ಮತ್ತು ಅಧಿವೇಶನಗಳ ಕೊನೆಯ ಹಂತಗಳಲ್ಲಿ ಮೂರೂ ರೈತ ವಿರೋಧಿ, ಕೃಷಿ ಕಾಯ್ದೆಗಳನ್ನು ಅಂಗೀಕರಿಸಿದೆ.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-೨೦೨೦, ಪರಂಪರೆಯಿಂದ ರೈತರ ವಶದಲ್ಲಿದ್ದು ಉದ್ಯೋಗದ ಭದ್ರತೆಯನ್ನೊದಗಿಸುತ್ತಿದ್ದ ಕೃಷಿ ಭೂಮಿಗಳನ್ನು ಬಲವಂತವಾಗಿ ಲೂಟಿಕೋರ ಕಾರ್ಪೊರೇಟ್ ಕಂಪನಿಗಳಿಗೆ ಕೃಷಿಕರಲ್ಲದ ಶ್ರೀಮಂತರ ಕೈಗೆ ವರ್ಗಾಯಿಸುತ್ತದೆ ಮಾತ್ರವಲ್ಲದೆ ದೊಡ್ಡ ಬಂಡವಾಳದಾರ ಕೃಷಿ ಉದ್ಯಮಕ್ಕೆ ದಾರಿ ತೆರೆಯಲಿದೆ, ಉಪಕಸುಬುಗಳನ್ನು ಕಿತ್ತುಕೊಳ್ಳಲಿದೆ. ಇದು ಗ್ರಾಮೀಣ ಜನತೆಯನ್ನು ತೀವ್ರ ಭಾಧೆಗೀಡು ಮಾಡಿ ಅವರ ಹಸಿವಿನ ಸಾವುಗಳನ್ನು ಮತ್ತು ಆತ್ಮಹತ್ಯೆಗಳನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಿದೆ.

ಅದೇ ರೀತಿ ಎಪಿಎಂಸಿ ತಿದ್ದುಪಡಿ ಕಾಯ್ದೆ-೨೦೨೦ ಕೃಷಿ ಉತ್ಪನ್ನಗಳ ಬೆಲೆಗಳನ್ನು ಏರಿಳಿತ ಮಾಡಿ ರೈತರನ್ನು ಲೂಟಿಗೊಳಪಡಿಸುವ ದೊಡ್ಡ ವರ್ತಕರು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ನೆರವಾಗಲಿದೆ. ಇದು ಕೆಲವೇ ವರ್ಷಗಳಲ್ಲಿ ರೈತರನ್ನು ಮತ್ತು ಕೃಷಿ ಆಧರಿಸಿದ ಎಲ್ಲ ಗ್ರಾಮೀಣ ಜನತೆಯ ಬದುಕನ್ನು ಕಿತ್ತುಕೊಳ್ಳಲಿದೆ. ರಜ್ಯದ ಸಾರ್ವಜನಿಕ ಒಡೆತನದ ನೂರಾರು ಎಪಿಎಂಸಿಗಳ ಹಲವು ದಶ ಸಾವಿರ ಕೋಟಿ ಮೊತ್ತದ ಬೆಲೆಬಾಳುವ ಆಸ್ತಿಗಳನ್ನು ಕೊಳ್ಳೆಹೊಡೆಯಲು ನೆರವಾಗಲಿದೆ.

ಜಾನುವಾರು ಹತ್ಯೆ ನಿಷೇದ ತಿದ್ದುಪಡಿ ಕಾಯ್ದೆ-೨೦೨೦ ರಾಜ್ಯದ ಹೈನುಗಾರಿಕೆಯನ್ನು ಹೊರಯಾಗಿಸಿ ಅವರನ್ನು ಹೊರದೂಡಲಿದೆ. ಸರ್ವಜನಿಕ ರಂಗದ ಹೈನು ಉದ್ಯಮವಾದ ಕರ್ನಾಟಕ ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ನಾಶ ಮಾಡಿ, ಕಾರ್ಪೋರೇಟ್ ಲೂಟಿಗೆ ನೆರವಾಗಲಿದೆ. ದಲಿತರು, ಅಲ್ಪಸಂಖ್ಯಾತರು ಮತ್ತಿತರರ ಆಹಾರದ ಹಕ್ಕನ್ನು ಕಸಿದುಕೊಂಡು ಈ ಬಡವರಿಗೆ ಪೌಷ್ಟಿಕ ಆಹಾರ ದೊರೆಯದಂತೆ ಆಕ್ರಮಣ ಮಾಡಲಿದೆ.

ಅದೇ ರೀತಿ ನೂತನ ರಾಷ್ಟೀಯ ಶಿಕ್ಷಣ ನೀತಿ ಯು ಕನ್ನಡ ಹಾಗೂ ಕನ್ನಡಿಗರ ಇತರ ಭಾಷೆಗಳ ಮತ್ತು ಬದುಕಿನ ಮೇಲಿನ ಮತ್ತೊಂದು ತೀವ್ರ ದಾಳಿಯಾಗಿದೆ. ದಲಿತರು, ಮಹಿಳೆಯರು ಮತ್ತು ಬಡವರಿಗೆ ಶಿಕ್ಷಣವನ್ನು ಮತ್ತು ಉದ್ಯೋಗಾವಕಾಶಗಳನ್ನು ನಾಶ ಮಾಡಲಿದೆ. ಮಧ್ಯಮ ವರ್ಗವನ್ನು ಈ ನೀತಿಯು ತೀವ್ರವಾದ ಲೂಟಿಗೆ ತೆರೆಯಲಿದೆ.

ಕೇಂದ್ರ ಸರ್ಕಾರವೂ ಇಂತಹುದೇ ಕಾರ್ಪೋರೇಟ್ ಲೂಟಿಗೆ ನೆರವಾಗುವ ದೇಶ ಹಾಗೂ ರೈತ ವಿರೋಧಿ ಕೃಷಿ ಮತ್ತು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳು, ಕಾಯ್ದೆಗಳು ಅಲ್ಲದೇ ದೇಶದ ಗ್ರಾಹಕರನ್ನು ಕಾಳಸಂತೆಯ ಮೂಲಕ ವ್ಯಾಪಕ ಲೂಟಿಗೊಳಪಡಿಸುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳ ಜಾರಿಗೆ ಕ್ರಮವಹಿಸಿದೆ. ಆದರೇ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಜಾರಿಗೊಳಿಸಲಾಗುತ್ತಿಲ್ಲ. ವಿದ್ಯುತ್ ರಂಗ ಮತ್ತಿತರ ಸಾರ್ವಜನಿಕ ಉದ್ದಿಮೆಗಳ ಲೂಟಿಕೋರ ಖಾಸಗೀಕರಣವನ್ನು ಜಾರಿಗೊಳಿಸುತ್ತಿದೆ. ಅದೇ ರೀತಿ ತೀವ್ರ ಸಂಕಷ್ಟದಲ್ಲಿರುವ ಜನತೆಯ ಮೇಲೆ ಹೇರುತ್ತಿರುವ ಬೆಲೆ ಏರಿಕೆಯ ಹೊರೆಯೂ ಸೇರಿದಂತೆ ಈ ಎಲ್ಲವುಗಳನ್ನು ತಡೆಯಲು ಮುಂದಾಗದೇ ತಮ್ಮ ಸರಕಾರ ಬೆಂಬಲಿಸುತ್ತಿರುವುದು ಮತ್ತು ಅವುಗಳಿಗೆ ಪೂರಕವಾಗಿ ಈ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವುದು ತೀವ್ರ ಖಂಡನೀಯವಾಗಿದೆ.

ರಾಜ್ಯದ ಜನತೆ ಕೋವಿಡ್ ಸಂಕಷ್ಟದ ನಡುವೆಯೂ, ಈ ಕುರಿತಂತೆ ವ್ಯಾಪಕವಾದ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರೂ ತಮ್ಮ ಸರಕಾರ ಕಣ್ಣಿದ್ದು ಕುರುಡನಂತೆ ಮತ್ತು ಕಿವಿಯಿದ್ದು ಕಿವುಡನಂತೆ ಲೂಟಿಕೋರ ಜಾಣತನವನ್ನು ಮರೆಯುತ್ತಿರುವುದು ಸರಕಾರದ ಘನತೆಯನ್ನು ಕುಗ್ಗಿಸಿದೆ.

ಒಟ್ಟಾರೆ ಈ ಎಲ್ಲಾ ಲೂಟಿಕೋರರ ಪರವಾದ ಈ ಕಾಯ್ದೆಗಳು, ನೂತನ ಶಿಕ್ಷಣ ನೀತಿಯ ಜಾರಿ, ಇವು ರಾಜ್ಯದ ಎಲ್ಲಾ ದುಡಿಯುವ ಜನತೆಯನ್ನು ದುರ್ಬಲ ಸಮುದಾಯಗಳನ್ನು ಹೊಸಕಿಹಾಕಲಿವೆ,

ಈ ಕಾಯ್ದೆಗಳು ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಕಲ್ಯಾಣರಾಜ್ಯ, ದೇಶದ ಸ್ವಾತಂತ್ರ್ಯ ಮತ್ತು ಸ್ವಾವಲಂಬನ ಹಾಗೂ ಸಾರ್ವಭೌಮತೆ ಮತ್ತು ಒಕ್ಕೂಟವಾದಿ ಸ್ವರೂಪದ ಮೇಲೆ ತೀವ್ರ ದಾಳಿ ನಡೆಸಲಿವೆ. ಇವು ಭಾರತದ ಸಂವಿಧಾನ ವಿರೋಧಿ ನಡೆಗಳಾಗಿವೆ.

ಆದ್ದರಿಂದ ಈ ಕೂಡಲೇ ರಾಜ್ಯ ಸರ್ಕಾರ ಈ ಸಂವಿಧಾನ ಹಾಗೂ ಜನ ವಿರೋಧಿಯಾದ ಕಾಯ್ದೆಗಳನ್ನು ವಾಪಾಸುಪಡೆಯಲು ಮತ್ತು ಈ ಕೂಡಲೇ ಅವುಗಳ ಜಾರಿಯನ್ನು ತಡೆಯಲು ಬಲವಾಗಿ ಒತ್ತಾಯಿಸುತ್ತೇವೆ.

ಈ ಸಂದರ್ಭದಲ್ಲಿ CPM ರಾಜ್ಯ ಕಾರ್ಯದರ್ಶಿ ಯು. ಬಸವರಾಜ, CPI ಜಿಲ್ಲಾ ಕಾರ್ಯದರ್ಶಿ ನಾಗಭೂಷಣ್ ರಾವ್ SUCI C ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಅವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ SUCI C ಜಿಲ್ಲಾ ಸಮಿತಿ ಸದಸ್ಯರಾದ ಎ.ದೇವದಾಸ್ ಅಧ್ಯಕ್ಷತೆ ವಹಿಸಿದ್ದರು. ಮತ್ತು ಈ ಸಂದರ್ಭದಲ್ಲಿ SUCI C ಜಿಲ್ಲಾ ಸಮಿತಿ ಸದಸ್ಯರಾದ MN ಮಂಜುಳಾ, ಆರ್. ಸೋಮಶೇಖರ್ ಗೌಡ, CPI ನ ಮುಖಂಡರು ಇಸ್ಮಾಯಿಲ್, ಚೆನ್ನಪ್ಪ, CPIM ನ ಸತ್ಯಬಾಬು ಮತ್ತು ಇತರರು ಭಾಗವಹಿಸಿದ್ದರು.

ವರದಿ:-ಮಹೇಶ್

LEAVE A REPLY

Please enter your comment!
Please enter your name here