ಕೊಟ್ಟೂರು:ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಮತದಾರರು ನಿರ್ಭಯವಾಗಿ ಮತದಾನ ಮಾಡಬೇಕು.
ಎನ್ನುವ ಉದ್ದೇಶದಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಪಿಡ್ ಆಕ್ಷನ್ ಫೋರ್ಸ್ ವತಿಯಿಂದ
ಕೊಟ್ಟೂರು ಪೊಲೀಸ್ ಠಾಣೆಯ ಸಹಕಾರದೊಂದಿಗೆ ತಾಲೂಕಿನ ಉಜ್ಜಿನಿ ಕಾಳಾಪುರ ಚಿನ್ನನಹಳ್ಳಿ ತೂಲಹಳ್ಳಿ ನಾಗರಕಟ್ಟೆ ಗ್ರಾಮಗಳಲ್ಲಿ ಪಂಥ ಸಂಚಲನ ಕೈಗೊಂಡರು.
ಉಜ್ಜಿನಿ ಗ್ರಾಮದಲ್ಲಿ ಪ್ರಾರಂಭಗೊಂಡು ಪಂಥ ಸಂಚಲನ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.ಸಂಚರಿಸಿ ಮತದಾರರಲ್ಲಿ ಭಯದ ವಾತಾವರಣ ಹೋಗಲಾಡಿಸಿದರು. ಪಂಥ ಸಂಚಲನದಲ್ಲಿ ಕೇಂದ್ರ ಭದ್ರತಾ ಪಡೆಯು ನರೇಶ್ ಗುಪ್ತ. ಮುನಿಶ್ ಗುಪ್ತ .
ಈ ಸಂದರ್ಭದಲ್ಲಿ ಕೂಡ್ಲಿಗಿ ಡಿವೈಎಸ್ಪಿ. ಕೊಟ್ಟೂರು ಸರ್ಕಲ್ ಇನ್ಸ್ಪೆಕ್ಟರ್. ಕೊಟ್ಟೂರು ಪಿಎಸ್ಐ. ಪೊಲೀಸ್ ಸಿಬ್ಬಂದಿ ಇದ್ದರು.