ಕೊಟ್ಟೂರು: ಸತತ 15 ವರ್ಷಗಳಿಂದ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡು
ಹಗರಿಬೊಮ್ಮನಹಳ್ಳಿ ಕ್ಷೇತ್ರದಾದ್ಯಂತ ಉತ್ತಮ ಜನ ಸೇವೆ ಮೂಲಕ ಗುರುತಿಸಿಕೊಂಡು ಪ್ರತಿ ಮನೆ ಮಾತಾಗಿದ್ದ ಚಿರಿಬಿ. ಕೊಟ್ರೇಶ್ ಹಾಗೂ ಶ್ರೀನಿವಾಸ್ ಭಾನುವಾರ ದಿಢೀರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಕ್ಷೇತ್ರದ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಇತ್ತೀಚೆಗೆ ಬಿಜೆಪಿ ಪಕ್ಷದ ಎಂದು ಕಾಣಿಸಿಕೊಳ್ಳುತ್ತಿದ್ದಂತೆ, ಚಿರಿಬಿ. ಕೊಟ್ರೇಶ್, ಶ್ರೀನಿವಾಸ್ ಅವರಿಗೆ ಬಿಜೆಪಿ ಪಕ್ಷದಿಂದ ಅಸಾಧ್ಯ ಎಂದು ಅರಿತು ಕೆಲ ದಿನಗಳ ಹಿಂದೆ ಬೇಸರದಿಂದ ಬಿಜೆಪಿ ಪಕ್ಷದ ಪ, ಪಂ ಮಾಜಿ ಸದಸ್ಯರು ಹಾಗೂ ಶ್ರೀನಿವಾಸ್ ಅವರು ಕಾಂಗ್ರೆಸ್ ಗೆ ಸೇರ್ಪಡೆ
ಭೀಮ ನಾಯ್ಕ್ ಮಾತನಾಡಿದರು ಇಂದು ಶ್ರೀ ಕ್ಷೇತ್ರ ಕೊಟ್ಟೂರು ಪಟ್ಟಣದಲ್ಲಿ ಹಿರಿಯ ನಾಯಕರಾದ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರಾದ ಚೀರಿಬಿ ಕೊಟ್ರೇಶ್,ಎಂ.ಶ್ರೀನಿವಾಸ್ ಮಾಜಿ ಎಸ್.ಟಿ ಮೋರ್ಚಾ ಅಧ್ಯಕ್ಷರು, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರಾದ ವೈ.ರಾಜಶೇಖರ್ ಹಾಗೂ ಮುಖಂಡರಾದ ಕೃಷ್ಣಪ್ರಸಾದ್,ಕೆ.ಬಾಬಣ್ಣ,ಕೆ.ರಾಮಣ್ಣ,ಕೆ.ಹನುಮಂತ,ಕೆ.ವಿನಯ್,ಟಿ.ಎಂ.ಮಂಜುನಾಥ,
ಟಿ.ಎಂ.ರಾಜಶೇಖರ್ ಹಾಗೂ ಇನ್ನು ಮುಂತಾದ ಹಿರಿಯ ನಾಯಕರು ಹಾಗೂ ಯುವಕರು ಬಿ.ಜೆ.ಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷದ ಹಾಗೂ ನಮ್ಮ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳಿಗೆ ಮನಸೋತು ನನ್ನ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಎಲ್ಲಾ ನಾಯಕರಿಗೆ ಕಾಂಗ್ರೆಸ್ ಪಕ್ಷದ ಶಾಲನ್ನು ಹಾಕಿ ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಲಾಯಿತು.
ವರದಿ: ಶಿವರಾಜ್ ಕನ್ನಡಿಗ