ಕೊಟ್ಟೂರು:ಜುಲೈ:02:-ಕೊಟ್ಟೂರಿನಲ್ಲಿ ನೂತನವಾಗಿ ಕೊಟ್ಟೂರೇಶ್ವರ ಬಜಾರ್, ಹಮಾಲರ ಸಂಘದ ಅಧ್ಯಕ್ಷರಾದ ಪ್ರಕಾಶ್ ರಾಂಪುರದ ಮತ್ತು ಸಂಘದ ಸರ್ವ ಪದಾಧಿಕಾರಿಗಳು ಪಟ್ಟಣದ ಶ್ರೀಮತಿ ಉತ್ತಂಗಿ ರುದ್ರಮ್ಮ ಇವರು ನಡೆಸುತ್ತಿರುವ ವೃದ್ರಾಶ್ರಮ ಮತ್ತು ಅನಾಥಾಶ್ರಮಕ್ಕೆ ತೆರಳಿ 10,000 ಗಳನ್ನು ದೇಣಿಗೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಹಮಾಲರ ಸಂಘದ ಅಧ್ಯಕ್ಷರಾದ ಪ್ರಕಾಶ್ ಮಾತನಾಡಿ ಸದಾ ಈ ರುದ್ರಶ್ರಮಕ್ಕೆ ನಮ್ಮ ಕೊಟ್ಟೂರೇಶ್ವರ ಬಜಾರ್ ಅಮಾಲರ ಸಂಘವು ಹಲವು ರೀತಿಯಲ್ಲಿ ಸಹಾಯ ಸಹಕಾರ ಮತ್ತು ಸೇವೆಯನ್ನು ಸದಾ ನೀಡುತ್ತದೆ ಎಂದು ಭರವಸೆ ನೀಡಿದರು ಇದೇ ಸಂದರ್ಭದಲ್ಲಿ ವೃದ್ರಾಶ್ರಮದ ಉತ್ತಂಗಿ ರುದ್ರಮ್ಮನವರು ಅಧ್ಯಕ್ಷರಾದ ಪ್ರಕಾಶ್ ರಾಂಪುರದ ಇವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಲೇಖಕರಾದ ಉಜ್ಜಯಿನಿ ರುದ್ರಪ್ಪನವರು ರಚಿಸಿದ ಅವರ ಜೀವನದ ಕೃತಿ ಅಮ್ಮ ಎಂಬ ಪುಸ್ತಕವನ್ನು ನೀಡಿ ಸನ್ಮಾನಿಸಿದರು. ನಂತರ ಉತ್ತಂಗಿ ರುದ್ರಮ್ಮ ಮಾತನಾಡಿ ನೀವುಗಳು ನಮ್ಮ ಆಶ್ರಮಕ್ಕೆ 10 ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿರುವುದು ನಮಗೆ ಸಂತಸ ತಂದಿದೆ. ಶ್ರೀಮಂತರು ದೇಣಿಗೆ ನೀಡುವುದು ಸರ್ವೆ ಸಾಮಾನ್ಯ ಆದರೆ ನಿಮ್ಮಂಥ ಶ್ರಮಿಕರು ನೀಡಿದ ದೇಣಿಗೆಯು ಪರಮಾತ್ಮನು ನಮ್ಮ ಆಶ್ರಮಕ್ಕೆ ಬಂದು ದೇಣಿಗೆ ನೀಡಿದಂತೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾದ. ಕೆ.ಅಜ್ಜಯ್ಯ, ಮತ್ತು ಆರ್. ಮಂಜುನಾಥ್, ಪಿ. ಶಿವು, ಬಿ. ಉಚ್ಚಂಗಿಪ್ಪ, ಜಿ. ರಾಜು, ಬಣಕಾರ್ ಕೊಟ್ರೇಶ್, ಎಲ್ಲಾ ಪದಾಧಿಕಾರಿಗಳು ಹಾಗೂ ಉಪಸ್ಥಿತರಿದ್ದರು.
ವರದಿ: ಶಿವರಾಜ್ ಕನ್ನಡಿಗ