ಕಿಶೋರಿಯರಿಗೆ ಋತುಚಕ್ರ ನೈರ್ಮಲ್ಯದ ಅರಿವಿನ ಆವಶ್ಯಕತೆ ಇದೆ; ಪುರಸಭೆ ಸದಸ್ಯೆ ರೇಖಾ ಡಿ. ಮಂಜುನಾಥ,

0
349

ಸಂಡೂರು: ಮೇ: 27:ತಾಲೂಕಿನ ಕುರೇಕುಪ್ಪ ಗ್ರಾಮದ ನಾಲ್ಕನೇ ವಾರ್ಡಿನಲ್ಲಿ ” ವಿಶ್ವ ಋತುಚಕ್ರ ನೈರ್ಮಲ್ಯ ದಿನ-2023″ ರ ಅಂಗವಾಗಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಋತುಚಕ್ರ ಮತ್ತು ವೈಯುಕ್ತಿಕ ಶುಚಿತ್ವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ ಇತ್ತೀಚೆಗೆ ಹೆಣ್ಣುಮಕ್ಕಳಿಗೆ ಹತ್ತು ವರ್ಷಕ್ಕೆ ಋತುಚಕ್ರ ಪ್ರಾರಂಭ ವಾಗುತ್ತಿರುವುದರಿಂದ ಅವರಿಗೆ ಅರಿವು ಮೂಡಿಸುವ ಅವಶ್ಯಕತೆ ಬಹಳ ಇದೆ, ನೈರ್ಮಲ್ಯದ ಶಿಕ್ಷಣ ಕೊಡುವುದರ ಜೊತೆಗೆ ಶುಚಿ ಕಾರ್ಯಕ್ರಮ ಪುನಃ ಪ್ರಾರಂಭ ಮಾಡಿ ಶುಚಿ ಪ್ಯಾಡ್ ಗಳನ್ನು ಉಚಿತವಾಗಿ ಪೂರೈಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಕೋರಿದರು ,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಗರ್ಭಶಯ ಅಂಗರಚನೆ,ಮತ್ತು ಋತುಚಕ್ರ ಪ್ರಾರಂಭವಾಗುವ ಕುರಿತು ಮಾಹಿತಿ ನೀಡಿದರು, ಹಾಗೇ ಋತುಚಕ್ರ ನೈರ್ಮಲ್ಯ ಕುರಿತು ಎಲ್ಲರಿಗೂ ಜಾಗೃತಿ ಮೂಡಿಸುವ ಕಾರ್ಯವನ್ನು ಇಲಾಖೆ ಕೈಗೊಂಡಿದೆ, ಕಿಶೋರಾವಸ್ಥೆಯಲ್ಲಿ ಋತುಚಕ್ರದ ಶುಚಿತ್ವದ ಬಗ್ಗೆ ಅರಿವು ಮೂಡಿಸಿದಲ್ಲಿ ಋತುಚಕ್ರದ ಭಯ ಹೋಗಲಾಡಿಸಿ, ಸ್ವಾಭಾವಿಕ ಪ್ರಕ್ರಿಯೆ ಈ ಸಮಯದಲ್ಲಿ ಸ್ವಚ್ಛತೆ ಬಗ್ಗೆ ಹೆಣ್ಣು ಮಕ್ಕಳು ಗಮನ ಹರಿಸುವುದರಿಂದ ಮುಖ್ಯವಾಗಿ ಜನನಾಂಗ ಮಾರ್ಗದ ಸೋಂಕು ತಡೆಗಟ್ಟಬಹುದಾಗಿದೆ, ಋತುಸ್ರಾವ ವಾಗುವ ಎರಡು ಮೂರು ದಿನಗಳು ಸ್ಯಾನಿಟರಿ ಪ್ಯಾಡ್ ಅಥವಾ ಸ್ವಚ್ಛವಾದ ಕಾಟನ್ ಬಟ್ಟೆಗಳನ್ನು ಬಳಸುವ ವಿಧಾನ ಮತ್ತು ವಿಲೇವಾರಿ ಮಾಡುವ ಬಗ್ಗೆ ಸಲಹೆಗಳನ್ನು ನೀಡುತ್ತಾ,ಸ್ವಚ್ಛವಾಗಿ ಕೈತೊಳೆಯುವುದು, ಆ ಎರಡು ಮೂರು ದಿನಗಳಲ್ಲಿ ಎರಡು ಬಾರಿ ಸ್ವಚ್ಛವಾಗಿ ಸ್ನಾನ ಮಾಡುವುದು, ಸಣ್ಣ ಪುಟ್ಟ ಕಿರಿಕಿರಿ ಗಳನ್ನು ನಿಭಾಯಿಸಲು ಪ್ರಶಾಂತ ಚಿತ್ತದಿಂದ ಧ್ಯಾನ ಮಾಡುವುದು, ಪೌಷ್ಟಿಕಾಹಾರ,ದ್ರವ ಪದಾರ್ಥಗಳ ಆಹಾರ, ಹಣ್ಣುಗಳನ್ನು ಸೇವಿಸುವುದು, ಲವಲವಿಕೆ ಇಂದ ಇರಲು ಕುಟುಂಬದವರೊಂದಿಗೆ ಸಹಜವಾಗಿ ತೊಡಗಿಕೊಳ್ಳುವುದು ಪಾಲಿಸಬೇಕು ಎಂದು ತಿಳಿಸಿದರು,

ಈ ಸಮಯದಲ್ಲಿ ತಂದೆ ಮತ್ತು ಅಣ್ಣ ತಮ್ಮಂದಿರು ಆವಳ ಆರೋಗ್ಯದ ಕಡೆ ಕಾಳಜಿ ವಹಿಸುವ ಮೂಲಕ ಹೆಣ್ಣುಮಕ್ಕಳ ಋತುಚಕ್ರ ಸಮಯದಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸಬೇಕು ಎಂದು ತಿಳಿಸಿದರು, ನಂತರ ಆಶಾ ಕಾರ್ಯಕರ್ತೆಯರು ಸ್ವಚ್ಛವಾಗಿ ಕೈತೊಳೆಯುವ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು, ಹಾಗೆ ಋತುಚಕ್ರ ನೈರ್ಮಲ್ಯ ಕುರಿತು ಕರಪತ್ರಗಳನ್ನು ವಿತರಣೆ ಮಾಡಲಾಯಿತು,

ಈ ಸಂದರ್ಭದಲ್ಲಿ ಆಶಾ ಪೆಸಿಲಿಟೇಟರ್ ಬಸಮ್ಮ,ಆಶಾ ಕಾರ್ಯಕರ್ತೆ ನೀಲಮ್ಮ, ತಿಮ್ಮಕ್ಕ, ಕಿಶೋರಿಯರಾದ ರಂಜಿತಾ,ಉಷಾ,ಪೂರ್ಣಿಮಾ,ತುಳಸಿ,ಸೌಮ್ಯ, ಅನ್ನಪೂರ್ಣ, ಆಶಾ, ರಾಮಾಲ್ಲಿಮ್ಮ, ರಾಜೇಶ್ವರಿ, ಐಶ್ವರ್ಯ, ಶಿಲ್ಪಾ,ಬೀಮಕ್ಕ, ತಾಯಂದಿರಾದ ಸುಮಲತಾ,ಉಮಾ, ಹನುಮಂತಮ್ಮ,ರೇಣುಕಮ್ಮ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here