ಸಂಡೂರು: ಆ: 23: ತಾಲೂಕಿನ ತೋರಣಗಲ್ಲು ಗ್ರಾಮದ ಶ್ರೀ ಗುರು ರಾಘವೇಂದ್ರ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಕ್ಷಯ ಮುಕ್ತ ಭಾರತ ರೂಪಿಸಲು ಕೈಜೋಡಿಸುವ ಕುರಿತು ಮತ್ತು ಆರೋಗ್ಯ ಸಿಂಚನ ಕಾರ್ಯಕ್ರಮದಡಿ ವಿಡಿಯೋ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು,
ಈ ಸಂದರ್ಭದಲ್ಲಿ ಕ್ಷಯ ರೋಗದಿಂದ ಬಳಲುತ್ತಿರುವ ಕುಟುಂಬ ಅಥವಾ ಮಧುಮೇಹಿ, ಮದ್ಯಪಾನಿಗಳು, ಧೂಮಪಾನಿಗಳಲ್ಲಿ ಅಥವಾ ಯಾರಿಗಾದರೂ ಕೆಮ್ಮು,ಜ್ವರ,ಹಸಿವೆ ಇರದ, ತೂಕ ಕಡಿಮೆಯಾಗುವ, ಕಫದಲ್ಲಿ ರಕ್ತ ಬೀಳುವ ಲಕ್ಷಣಗಳು ಇದ್ದಲ್ಲಿ ಆಸ್ಪತ್ರೆಗೆ ಕಳಿಸಿಕೊಟ್ಟು ಕ್ಷಯರೋಗ ಪತ್ತೆ ಹಚ್ಚುವ ಕಾರ್ಯದಲ್ಲಿ ಕೈಜೋಡಿಸ ಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು, ನಂತರ ಪ್ರಭಾರ ಮುಖ್ಯ ಶಿಕ್ಷಕ ಶೇಶಾದ್ರಿ ಮಾತನಾಡಿ ಮಕ್ಕಳು ವಿಡಿಯೋಗಳನ್ನು ನೋಡಿ ಆನಂದಿಸಿದ್ದಾರೆ, ಉತ್ತರಗಳನ್ನು ಕೊಟ್ಟು ಬಹುಮಾನ ಪಡೆದಿದ್ದಾರೆ ಇದು ಸಂತಸ ತಂದಿದೆ ಎಂದು ತಿಳಿಸಿದರು,
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಲೋಹಿತ್,ಅಮೃತಾ,ಫಾತಿಮಾ,ಪ್ರವೀಣಾ, ವಿದ್ಯಾರ್ಥಿಗಳಾದ ವೈಷ್ಣವಿ,ಋತಿಕಾ, ಗುಡಿಯಾ,ಪ್ರಿಯಾ ಗುಪ್ತಾ,ಅಲ್ಮಾಸ್, ವೆಂಕಟ್,ಭರತ್,ಪ್ರವೀಣ್,ಯಾಸೀನ್,ನರೇಶ್,ಸಮಾಲೋಚಕ ಪ್ರಶಾಂತ್, ಆರೋಗ್ಯ ನಿರೀಕ್ಷಕ ಶಕೀಲ್ ಅಹಮದ್, ನಿಜಾಮುದ್ದೀನ್, ಗ್ರಾಮ ಪಂಚಾಯತಿ ಕರ ವಸೂಲಿಗಾರ ಶಂಕರ್ ಇತರರು ಉಪಸ್ಥಿತರಿದ್ದರು