ಸಂಡೂರು ತಾಲೂಕಿನ ಧರ್ಮಾಪುರ ಹಾಗೂ ಸುಶೀಲಾನಗರದ ಬಳಿಯಲ್ಲಿ ಅದಿರು ಸಾಗಣೆಗಾಗಿ ರೈಲ್ವೆ ಸೈಡಿಂಗ್ ಮತ್ತು ರೈಲ್ವೆ ಸಬ್ ಲೈನ್ ನಿರ್ಮಾಣ ಯೋಜನಾ ಸ್ಥಳಕ್ಕೆ ಮಂಗಳವಾರ ಕರ್ನಾಟಕ ಗಣಿ ಮತ್ತು ಪರಿಸರ ಪುನಚ್ಚೆತನ ನಿಗಮದ ಅಧ್ಯಕ್ಷರಾದ ಸುಭಾಷ್ ಚಂದ್ರ ರೇ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಸರ ಸಂರಕ್ಷಣೆ ದೃಷ್ಠಿಯಿಂದ ಅದಿರನ್ನು ಕನ್ವೇಯರ್ ಬೆಲ್ಟ್ ಮತ್ತು ರೈಲ್ವೆ ಮೂಲಕ ಸಾಗಾಟ ಮಾಡಲು ಕ್ರಮಕೈಗೊಳ್ಳಬೇಕು ಎಂಬ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ತಾಲೂಕಿನ ಧರ್ಮಾಪುರ ಹಾಗೂ ಸುಶೀಲಾನಗರ ಬಳಿಯಲ್ಲಿ ರೈಲ್ವೆ ಸೈಡಿಂಗ್ ಮತ್ತು ರೈಲ್ವೆ ಸಬ್ ಲೈನ್ ನಿರ್ಮಿಸಲು ಯೋಜಿಸಲಾಗಿದೆ
ಈ ಕಾರ್ಯಕ್ಕೆ ಬೇಕಾಗಿರುವ ಅರಣ್ಯ ಪ್ರದೇಶದ ಗಡಿ ಗುರುತು ಕೆಲಸದ ಪ್ರಗತಿಯನ್ನು ಪರಿಶೀಲಿಸಿದರು
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಎಸಿಎಫ್ ಕಂಟೇಪ್ಪ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಮಹಾವೀರ್, ವಲಯ ಅರಣ್ಯಾಧಿಕಾರಿ ಸಯ್ಯದ್ ದಾದಾ ಖಲಂದರ್ ಇದ್ದರು