“ಅಂಚೆ ಇಲಾಖೆಯಿಂದ ಏಕ್ ದಿವಸ್ ಏಕ್ ಘಂಟ ಸ್ವಚ್ಛತಾ ಅಭಿಯಾನದ”

0
59

ಕೊಟ್ಟೂರು:
ಅಕ್ಟೋಬರ್ 1  ಭಾನುವಾರ ದಂದು ಏಕ್ ದಿವಸ್ ಏಕ್ ಘಂಟ ಸ್ವಚ್ಛತಾ ಅಭಿಯಾನದ ಅಡಿಯಲ್ಲಿ ಕೊಟ್ಟೂರಿನ ಎಪಿಎಂಸಿ ಆವರಣವನ್ನು ಹಾಗೂ ಅಂಚೆ ಕಚೇರಿಯ ಜಾಗವನ್ನು ಕೊಟ್ಟೂರಿನ ಎಲ್ಲಾ ಅಂಚೆ ಇಲಾಖೆ ಸಿಬ್ಬಂದಿ ವರ್ಗದವರು ಹಾಗೂ ಕೂಡ್ಲಿಗಿ ಅಂಚೆಪಾಲಕರು ಸೇರಿಕೊಂಡು ಸ್ವಚ್ಛಗೊಳಿಸಿದರು,


ದೇಶದ ಪ್ರಧಾನಮಂತ್ರಿಯವರ ಆಕಾಂಕ್ಷೆಯಂತೆ  ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರಾದ ವಿ, ಎಲ್, ಚಿತಕೋಟೆ ಇವರ ಆದೇಶದಂತೆ ದೇಶದ ಸ್ವಚ್ಛತಾ ಅಭಿಯಾನವು ವಿಶ್ವಕ್ಕೆ ಮಾದರಿಯಾಗಲಿ ಎನ್ನುವ ಸದುದ್ದೇಶವನ್ನು ಇಟ್ಟುಕೊಂಡು ಅಂಚೆ ಇಲಾಖೆಯ ಸಿಬ್ಬಂದಿಯಿಂದ ಹಾಗೂ ನಾಗರಿಕರ ಸಹಕಾರದಿಂದ ಆಯಾ ಊರಿನ ಒಂದು ಜಾಗವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ,
ಸ್ವಚ್ಛತಾ ಅಭಿಯಾನದಲ್ಲಿ ಕೊಟ್ಟೂರಿನ ಅಂಚೆಪಾಲಕರಾದ ಎಂ, ರಾಜಶೇಖರ್, ಕೂಡ್ಲಿಗಿ ಅಂಚೆಪಾಲಕರಾದ ಅಂಚೆ ಕೊಟ್ರೆಶ್, ಅಂಚೆ ಸಹಾಯಕರಾದ ಗಂಡಿ ವಿರುಪಾಕ್ಷಪ್ಪ, ಪೂರ್ಣಿಮಾ ಹಳ್ಳಿ, ಅಂಚೆ ಪೇದೆಗಳಾದ ಎಂ ಕಲ್ಲೇಶಪ್ಪ, ಬಿ ಎಂ ರುದ್ರೇಶ್ ಮೂರ್ತಿ, ಶ್ರೀಮತಿ ಶಶಿರೇಖಾ, MTS ಸುಮಾ ಚಿತ್ರಾಲು, ಗ್ರಾಮೀಣ ಅಂಚೆ ನೌಕರರ ಸಂಘದ ವೃತ್ತ ಸಂಚಾಲಕರಾದ ವಿ ಬನ್ನೇಶ್, ಗ್ರಾಮೀಣ ಅಂಚೆ ನೌಕರರಾದ ಕೆ,ಹನುಮಂತಪ್ಪ, ಕೆ ಶಿವಕುಮಾರ್,  ಪೃಥ್ವಿರಾಜ್ ಸಂಗೀತ, ಅಶ್ವಿನಿ, ಕಡ್ಲಿ ವೀರಣ್ಣ, ಚಂದನಬಾಯಿ, ವಿ,ಕೆಂಗಪ್ಪ ಎಸ್ ಪಾಂಡುರಂಗಶೆಟ್ಟಿ, ಡಿ ಶರತ್, ಇನ್ನುಳಿದ ಎಲ್ಲಾ ಅಂಚೆ ಸಿಬ್ಬಂದಿಯವರು ಭಾಗವಹಿಸಿದ್ದರು,

LEAVE A REPLY

Please enter your comment!
Please enter your name here