ವಿಜಯನಗರಜಿಲ್ಲೆ(ಹೊಸಪೇಟೆ)ಡಿ.02: ಕರ್ನಾಟಕ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಸಿಬ್ಬಂದಿಗಳಿಗೆ
ಹೊಸಪೇಟೆ ನಗರದ ತಾಲ್ಲೂಕು ಕಚೇರಿಯ ಸಭಾಂಗಣದ ಪತ್ರಿಕಾ ಭವನದಲ್ಲಿ ಬುಧವಾರ ತಹಶೀಲ್ದಾರರಾದ ಹೆಚ್.ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಚುನಾವಣೆಯ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ನೋಡೆಲ್ ಅಧಿಕಾರಿಯಾದ ಸೋಮಶೇಖರ್, ಮಾಸ್ಟರ್ ಟ್ರೇನರ್ ಆದ ಸಮದ್ ಕೊಟ್ಟೂರು ಅವರು ಚುನಾವಣಾ ನೀತಿ ನಿಯಮಗಳ ಬಗ್ಗೆ ಹಾಗೂ ಚುನಾವಣಾ ಪ್ರಕ್ರಿಯೆ ಕುರಿತು ತರಬೇತಿ ನೀಡಿದರು.
ಈ ತರಬೇತಿ ಕಾರ್ಯಾಗಾರದಲ್ಲಿ 18 ಪಿ.ಆರ್.ಓ, 18 ಎ.ಪಿ.ಆರ್.ಓ. ಮತ್ತು 18 ಪಿ.ಏ., ಮತ್ತು ಆಯಾ ಗ್ರಾಮಪಂಚಾಯತಿಯ ಪಿ.ಡಿ.ಓ. ಹಾಗೂ ಕಾರ್ಯದರ್ಶಿ ಮತ್ತು ಸರ್ಕಾರಿ ಶಾಲಾ-ಕಾಲೇಜಿನ ಶಿಕ್ಷಕರ ವೃಂದದವರು ಪಾಲ್ಗೊಂಡಿದ್ದರು.
ಹೊಸಪೇಟೆ ತಾಲೂಕಿನ 14 ಗ್ರಾಮಪಂಚಾಯತ್ ಹಾಗೂ 2 ಪಟ್ಟಣ ಪಂಚಾಯತ್ ಗಳ ಸದಸ್ಯರು ಡಿ.10ರಂದು ಮತದಾನ ಚಲಾಯಿಸಲಿದ್ದಾರೆ.