ಮತದಾನ ಜಾಗೃತಿ ಮೂಡಿಸುತ್ತಿರುವ ವಿಕಲಾಂಗ ಚೇತನರು ಮಹಾನ್ ಚೇತನರು..

0
10

ಮತದಾನ ಜಾಗೃತಿ ಮೂಡಿಸುವ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಈ ಕಾರ್ಯವನ್ನು ಮಾಡುತ್ತಿರುವ ವಿಕಲಾಂಗ ಚೇತನರ ಕಾರ್ಯ ಶ್ಲಾಘನೀಯ ಎಂದು ಸಹಾಯಕ ಚುನಾವಣೆ ಅಧಿಕಾರಿಗಳಾದ ಸತೀಶ್ ತಿಳಿಸಿದರು.

ಲೋಕಸಭಾ ಚುನಾವಣೆ ಪ್ರಯುಕ್ತ ಸ್ವಿಪ್ ಸಮಿತಿ ಸಂಡೂರು ವತಿಯಿಂದ ದಿನಾಂಕ: 06.04.2024 ರಂದು ಏರ್ಪಡಿಸಲಾಗಿದ್ದ ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರ ವಾಹನ (ಬೈಕ್) ಮತದಾನ ಜಾಗೃತಿ ಜಾಥಕ್ಕೆ ಹಸಿರು ಬಾವುಟ ಹಾರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸುಭದ್ರ ದೇಶದ ಭವಿಷ್ಯಕ್ಕಾಗಿ ಪ್ರಜೆಗಳೆ ಪ್ರಭುಗಳು ಆಗಿದ್ದೀರಿ ಆದಕಾರಣ ಪ್ರಜೆಗಳು ಯಾವುದೆ ಆಮೀಷಕ್ಕೆ ಒಳಗಾಗದೆ ಮತದಾನ ಮಾಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಕಾಧಿಕಾರಿ ಹಾಗೂ ತಾಲೂಕಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಷಡಕ್ಷರಯ್ಯ ಹೆಚ್, ಪುರಸಬೆ ಮುಖ್ಯ ಅಧಿಕಾರಿಗಳಾದ ಜಯಣ್ಣ, ಶಿಶು ಅಬಿವೃದ್ಧಿ ಯೋಜನೆ ಅಧಿಕಾರಿಗಳಾದ ಎಲೆ ನಾಗಪ್ಪ, ಸಹಾಯಕ ನಿರ್ದೇಶಕರಾದ ವೆಂಕಟೇಶ್, ವಿಕಲಚೇತನರ ವಿಭಾಗದಿಂದ ಎಂ.ಆರ್. ಡಬ್ಲ್ಯೂ. ಸಿ ಕರಿಬಸಜ್ಜ, ಹಾಗೂ ಎಲ್ಲಾ ವಿ.ಆರ್.ಡಬ್ಲ್ಯೂ, ಮತ್ತು ಯು.ಆರ್.ಡಬ್ಲ್ಯೂ, ಕಾರ್ಯಕರ್ತರು ಭಾಗಿಯಾಗಿ ಈ ಜಾಥ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಜಾಥ ತಾಲೂಕು ಪಂಚಾಯಿತಿಯಿಂದ ಚಾಲನೆಗೊಂಡು ತಾಲೂಕು ಕಚೇರಿಗೆ ತೆರಳಿ ವಿಜಯ ಸರ್ಕಲ್ ಗೆ ತಲುಪಿ ನಂತರ ಕೃಷ್ಣನಗರ ಗ್ರಾಮದ ಬಿಕೆಜಿ ಶಾಲೆ ತಲುಪಿ ನಂತರ ಪುರಸಭೆ ಬಸ್ ನಿಲ್ದಾಣದ ಮೂಲಕ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಮುಖಾಂತರದಿಂದ ಅರಣ್ಯ ಇಲಾಖೆ ಕಚೇರಿವರಿಗೆ ತಲುಪಿ ಅಲ್ಲಿಂದ ಪುರಸಭೆ ಬಸ್ ನಿಲ್ದಾಣದಲ್ಲಿ ಜಾಗೃತಿ ಮಾಹಿತಿ ನೀಡಿ ಮಾತನಾಡಿದ ಸ್ವೀಪ್ ಸಮಿತಿ ಅಧ್ಯಕ್ಷರಾದ ಷಡಕ್ಷರಯ್ಯ ಹೆಚ್ ಅವರು ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಮತಚಲಾಯಿಸಿ ಹಾಗೂ ವಿಕಲಚೇತನರು ಸಹ ಮತಗಟ್ಟೆಗೆ ಬಂದು ಮತಚಲಾಯಿಸಲು ಸಮಂಜಸ ಸೌಕರ್ಯ ಕಲ್ಪಿಸಲಾಗಿದೆ ರಾoಫ್ಸ್ , ರೈಲಿಂಗ್, ವ್ಹೀಲ್ ಚೇರ್, ಬೂತ್ ಕನ್ನಡಿ, ವಿಕಲಚೇತನರಿಗೆ ಸಾರಿಗೆ ವ್ಯವಸ್ಥೆ ಶೌಚಾಲಯ ವ್ಯವಸ್ಥೆ ಮಾಡಲಾಗಿದ್ದು ಮನೆಯಿಂದ ಬಂದು ಮತ ಹಾಕದೆ ಇರುವವರಿಗೆ 12 ಡಿ ನಮೂನೆ ಕೊಟ್ಟು ಮತಹಾಕುವ ವ್ಯವಸ್ಥೆಯನ್ನು ಮಾಡಲಾಗಿದೆ. ಯಾರು ಕೂಡ ಮತದಾನದಿಂದ ವಂಚಿತರಾಗಬಾರದು ಎಂದು ತಿಳಿಸಿದರು.

ನಂತರ ಈ ಜಾಥ ತಾಲೂಕು ಪಂಚಾಯಿತಿ ತಲುಪಿದ ನಂತರ ಸ್ವೀಪ್ ಸಮಿತಿ ಅಧ್ಯಕ್ಷರಾದ ಷಡಕ್ಷರಯ್ಯ ಹೆಚ್ ಇವರು ಎಲ್ಲರಿಗೂ ಮತದಾನದ ಪ್ರತಿಜ್ಞಾವಿಧಿ ಭೋದಿಸಿ ಜಾಥ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು..

LEAVE A REPLY

Please enter your comment!
Please enter your name here