ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ 45ನೇ ವರ್ಷದ ದಿನಾಚರಣೆ
ದಿನಾಂಕ:- 06.04.2024 ರಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ದೌಲತ್ ಪುರ ರಸ್ತೆಯಲ್ಲಿರುವ ಸಂಡೂರು ಮಂಡಲ ಕಛೇರಿಯ ಕಾರ್ಯಾಲಯದಲ್ಲಿ
ಬೆಳಿಗ್ಗೆ:8:30ಕ್ಕೆ ಪಕ್ಷದ ಧ್ವಜಾರೋಹಣವನ್ನು ನೆರವೇರಿಸಲಾಯಿತು
ನಂತರ ಬೆಳಿಗ್ಗೆ:10:30ರಿಂದ ಮಧ್ಯಾಹ್ನ 1:30ರವರೆಗೆ ಪಕ್ಷದ ಧ್ವಜಗಳನ್ನು ಹಿಡಿದುಕೊಂಡು ಬಿಜೆಪಿಯ ಕಾರ್ಯಕರ್ತರು ಪಾದಯಾತ್ರೆಯನ್ನು ಸಂಡೂರು ಮಂಡಲ ಕಛೇರಿಯಿಂದ ಪ್ರಾರಂಭ ಮಾಡಿ ಬಳ್ಳಾರಿ ರಸ್ತೆಯ ಮೂಲಕ ವಿಜಯವೃತ್ತ, ಪುರಸಭೆ ಬಸ್ ನಿಲ್ದಾಣ, ನೂರಾನಿ ಮಸೀದಿ ರಸ್ತೆಯ ಮೂಲಕ ಕೆಇಬಿ.ವೃತ್ತದಿಂದ ಶ್ರೀವಾಲ್ಮೀಕಿ ವೃತ್ತದ ಮೂಲಕ ವಿಜಯ ವೃತ್ತದಲ್ಲಿ ಬಿಜೆಪಿ ಪಕ್ಷದ ಪ್ರಮುಖರ ಭಾಷಣ ಮಾಡುವ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ
ನಾನಾ ಸಾಹೇಬ್ ನಿಕ್ಕಂ, ಸಂಡೂರು ವಿಧಾನಸಭೆ ಕ್ಷೇತ್ರದ ಉಸ್ತುವಾರಿಗಳಾದ ವಿ ಕೆ ಬಸಪ್ಪ, ಪ್ರಧಾನ ಕಾರ್ಯದರ್ಶಿಗಳಾದ
ರಘುನಾಥ್ ಆರ್ ಟಿ, ಪ್ರವೀಣ್ ಕುಮಾರ್,
ಮಂಡಲದ ಉಪಾಧ್ಯಕ್ಷರುಗಳಾದ ಯರಿಸ್ವಾಮಿಕರಡಿ, ನರಸಿಂಹ, ಈಶ್ವರ್ ಒಡೆಯರ್, ಪ್ರಭುಗೌಡರು, ಶ್ರೀಮತಿ ಪುಷ್ಪ, ಕಾರ್ಗಿಲ್ ಬಸವನಗೌಡರು, ಮಹಿಳಾ ಮೋರ್ಚಾದ ಅಧ್ಯಕ್ಷರು ಶ್ರೀಮತಿ ದೀಪಾ ಘೋಡ್ಕೆ,ಕಾರ್ಯಾಲಯ ಕಾರ್ಯದರ್ಶಿ ದರೋಜಿ ರಮೇಶ್, ಕಿನ್ನೂರೇಶ್ವರ್, ವಿಶ್ವನಾಥ್ ರೆಡ್ಡಿ, ಪುರುಷೊತ್ತಮ್ಮ , ವೀರೇಶ್ ಗೌಡ, ಸಂಡೂರು ಪುರಸಭೆ ಸದಸ್ಯರುಗಳು, ಎಲ್ಲಾ ಚುನಾಯಿತ ಪ್ರತಿನಿಧಿಗಳು, ಬಿಜೆಪಿ ಮಂಡಲದ ಪದಾಧಿಕಾರಿಗಳು ಹಾಗೂ ಎಲ್ಲಾ ಮೋರ್ಚಾಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಹಿರಿಯ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.