ಖಾನಾಪುರ: ಕೋರೊನಾ ಹಿನ್ನೆಲೆಯಲ್ಲಿ ಕಳೆದ 5-6 ತಿಂಗಳಿಂದ ಬಡ ಕುಟುಂಬಗಳು ಕೆಲಸವಿಲ್ಲದ ಕಾರಣ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ.ಒಂದು ಹೊತ್ತಿನ ಊಟಕ್ಕೆ ಪರಿದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ ಕಾರಣ ಕೆಲವು ಖಾಸಗಿ ಕಿರು ಸಾಲ ಹಣಕಾಸು ಸಂಸ್ಥೆಗಳು ನೀಡಿದ ಸಾಲಕ್ಕೆ ವಾರದ ಕಂತು ಪಾವತಿಸುವಂತೆ ಒತ್ತಡ ಹೇರಿ ಮತ್ತು ಮಾನಸಿಕ ತೊಂದರೆ ನೀಡುತ್ತಿದ್ದು ಇದರಿಂದ ಬಡ ಕುಟುಂಬಗಳು ಮಾನಸಿಕ ತೊಂದರೆಗಳು ಅನುಭವಿಸುತ್ತಿದೆ.ಇದರ ಬಗ್ಗೆ ಸರಕಾರವು ಕೂಡಾ ಕಾಲವಕಾಶ ನೀಡಿ ಅಂತಾ ತಿಳಿಸಿದೆ.ಆದರೂ
ಕೆಲವು ಖಾಸಗಿ ಹಣಕಾಸು ಸಂಸ್ಥೆಗಳು ಸರಕಾರದ ಆದೇಶವನ್ನು ನಿರ್ಲಕ್ಷ್ಯ ಮಾಡಿ ಸಂಕಷ್ಟದಲ್ಲಿದ್ದ ಬಡ ಕುಟುಂಬಗಳಿಗೆ ಸಾಲ ಮರುಪಾವತಿ ಮಾಡುವಂತೆ ಪಿಡಿಸುತ್ತಿದ್ದಾರೆ.ಸಾಲದ ಕಂತು ಕಂತು ಪಾವತಿಸುವಂತೆ ಒತ್ತಡ ಹೇರುತ್ತಿರುವ ಕೆಲವು ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಆರ್ಥಿಕ ಪರಿಸ್ಥಿತಿ ಸುದಾರಿಸುವರೆಗೆ ಸಾಲ ಮರುಪಾವತಿಗೆ ಕಾಲವಕಾಶ ನೀಡಬೆಕೆಂದು ಖಾನಾಪುರ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಮಾನ್ಯ ತಹಶಿಲ್ದಾರರಿಗೆ ಒತ್ತಾಯಿಸಿದರು..
ವರದಿಗಾರ: ಚೇತನ ತಳವಾರ